ರಾಯಚೂರು | ಸಿಡಿಲು ಬಡಿದು ಮಹಿಳೆ ಮೃತ್ಯು
Update: 2025-05-20 21:46 IST
ಯಲ್ಲಮ್ಮ ಶಿವಪ್ಪ
ರಾಯಚೂರು : ಸಿಡಿಲು ಬಡಿದು ಮಹಿಳೆಯೊರ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದೇವದುರ್ಗ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಯಲ್ಲಮ್ಮ ಶಿವಪ್ಪ (40 ಎಂದು ಗುರುತಿಸಲಾಗಿದೆ.
ಯಲ್ಲಮ್ಮ ಸಂಜೆ ಬಯಲು ಬಹಿರ್ದೆಸೆಗೆ ಹೋಗುವಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಮೃತ ಮಹಿಳೆಗೆ ಪತಿ, ಎರಡು ಮಕ್ಕಳಿದ್ದಾರೆ.