×
Ad

ಶಿವಮೊಗ್ಗ | ಯುವಕನಿಂದ ಕಿರುಕುಳ ಆರೋಪ : ಬಾಲಕಿ ಆತ್ಮಹತ್ಯೆ, ದೂರು ದಾಖಲು

Update: 2024-02-25 16:03 IST

ಶಿವಮೊಗ್ಗ: ಯುವಕನೊಬ್ಬನ ಕಾಟಕ್ಕೆ ಬೇಸತ್ತು ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಮೃತ ಬಾಲಕಿಗೆ(ಹೆಸರು ಗೌಪ್ಯ) ಯುವಕನೊಬ್ಬ ಪ್ರೀತಿಸುವಂತೆ ನಿತ್ಯ ಕಾಡುತ್ತಿದ್ದನು. ಈ ವಿಚಾರ ತಿಳಿದ ಮೃತ ಬಾಲಕಿಯ ಪೋಷಕರು ಎರಡು ತಿಂಗಳ ಹಿಂದೆಯೇ ಯುವಕನಿಗೆ ಎಚ್ಚರಿಕೆ ನೀಡಿದ್ದರು. ಆದರೂ ಬಿಡದ ಯುವಕ ಪ್ರೀತಿಸುವಂತೆ  ಪೀಡಿಸುವುದನ್ನು ಮುಂದುವರೆಸಿದ್ದನು ಎಂದು ಹೇಳಲಾಗಿದೆ.

ಯುವಕನ ಕಾಟ ತಾಳಲಾರದೆ ಬಾಲಕಿ ಫೆ.24 ರಂದು ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಲಕಿಯ ಕುಟುಂಬಸ್ಥರು ಯುವಕನ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News