×
Ad

ತುಮಕೂರು | ಬೇಕರಿ-ಬ್ಯಾಂಗಲ್ಸ್ ಸ್ಟೋರ್‌ಗೆ ಲಾರಿ ನುಗ್ಗಿ ಇಬ್ಬರ ಮೃತ್ಯು

Update: 2025-07-23 00:12 IST

ತುಮಕೂರು : ಕೊರಟಗೆರೆ ತಾಲೂಕು ಹೊಳವನಹಳ್ಳಿ ಸರ್ಕಲ್‌ನಲ್ಲಿ ಗೊಬ್ಬರ ತುಂಬಿದ್ದ ಲಾರಿಯ ಬ್ರೇಕ್‌ಫೈಲ್ ಆಗಿ ಬ್ಯಾಂಗಲ್ ಸ್ಟೋರ್ ಮತ್ತು ಬೇಕರಿಗೆ ನುಗ್ಗಿದ ಪರಿಣಾಮ ಕಾಟೇನಹಳ್ಳಿ ಗ್ರಾಮದ ರಂಗಸ್ವಾಮಯ್ಯ, ಪುರದಹಳ್ಳಿಯ ಬೈಲಪ್ಪ(65) ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಕಾಂತರಾಜು, ಜಯಣ್ಣ, ಸಿದ್ದಗಂಗಮ್ಮ, ಮೋಹನಕುಮಾರ್ ಅವರು ಗಾಯಗೊಂಡಿದ್ದು ತುಮಕೂರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಕೋಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News