ಮೀಸಲಾತಿ ಫಲಾನುಭವಿಗಳು ‘ಬೌದ್ಧ ಧರ್ಮ’ ಎಂದು ನಮೂದಿಸಿ: ದಸಂಸ ಮುಖಂಡ ಸುಂದರ ಮಾಸ್ತರ್ ಕರೆ
ಸುಂದರ ಮಾಸ್ತರ್
ಉಡುಪಿ, ಸೆ.27: ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ/ ಶೈಕ್ಷಣಿಕ / ಆರ್ಥಿಕ ಸಮೀಕ್ಷೆಗೆ ಸಂಬಂದಿಸಿದಂತೆ ದಲಿತ ಸಂಘಟನೆಗಳು, ಪ್ರಗತಿಪರ ಚಳುವಳಿಯ ಮುಖಂಡರು ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದಸಂಸ (ಅಂಬೇಡ್ಕರ್ವಾದ) ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ತಿಳಿಸಿದ್ದಾರೆ.
ನಾವೀಗ ದಲಿತ ಸಮುದಾಯದಲ್ಲಿ ಜನಜಾಗೃತಿ ಮೂಡಿಸುತಿದ್ದು,, ಸಮೀಕ್ಷೆಗೆ ಬಂದವರಲ್ಲಿ ಧರ್ಮದ ಕಾಲಂ ನಂಬರ್ 08ರಲ್ಲಿ ಸ್ಪಷ್ಟವಾಗಿ ಬೌಧ್ಧ ಎಂದು ನಮೂದಿಸುವ ಮೂಲಕ ಬಾಬಾಸಾಹೇಬರ ಆಶಯದಂತೆ ನಡೆದುಕೊಳ್ಳಬೇಕೆಂದು ವಿನಂತಿ ಮಾಡಿಕೊಳ್ಳುತಿದ್ದೇವೆ ಎಂದು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಇದರೊಂದಿಗೆ ಜಾತಿ ಕಾಲಂನಲ್ಲಿ ನಂಬರ್ 09ರಲ್ಲಿ ಪರಿಶಿಷ್ಟ ಜಾತಿ ಎಂದು ಬರೆಸಬೇಕು. ಉಳಿದಂತೆ ಉಪಜಾತಿ ಕಾಲಂನಲ್ಲಿ ತಮ್ಮ ತಮ್ಮ ಉಪಜಾತಿ ಯನ್ನು ನಮೂದಿಸಿ ಅಂಬೇಡ್ಕರ್ ಅವರ ಅನುಯಾಯಿಗಳಾಗಿ ಮುಂದುವರಿ ಯುವಂತೆ ಅವರು ಮನವಿ ಮಾಡಿದ್ದಾರೆ.
ಬಾಬಾಸಾಹೇಬರು 1956ರ ಅಕ್ಟೋಬರ್ 14ರಂದು ನಾಗಪುರದಲ್ಲಿ ಲಕ್ಷಾಂತರ ಜನರನ್ನು ಉದ್ದೇಶಿಸಿ ಮಾತ ನಾಡಿ, ಹಿಂದು ಧರ್ಮದಲ್ಲಿ ಹುಟ್ಟಿದ್ದೇನೆ. ಅದು ನನ್ನ ಆಯ್ಕೆ ಆಗಿರಲಿಲ್ಲ. ಆದರೆ ಅಸಾಮಾನತೆಯಿಂದ ಕೂಡಿದ ಮನುಷ್ಯರನ್ನು ಮನುಷ್ಯರಂತೆ ಕಾಣದ ‘ಹಿಂದುವಾಗಿ ಸಾಯಲಾರೆ’ ಎಂದು ಕರೆಕೊಟ್ಟು ಬೌಧ್ಧ ಧರ್ಮವನ್ನು ಸ್ವೀಕರಿ ಸಿದ್ದರು. ಬಾಬಾಸಾಹೇಬರ ಈ ನಂಬಿಕೆಯನ್ನು ಹುಸಿಗೊಳಿಸದೇ ದಯವಿಟ್ಟು ಎಲ್ಲರೂ ಧರ್ಮದ ಕಾಲಂನಲ್ಲಿ ಬೌಧ್ಧ ಎಂದು ಬರೆಸಬೇಕು ಎಂದು ಸುಂದರ ಮಾಸ್ತರ್ ಮನವಿ ಮಾಡಿದ್ದಾರೆ.