ತೆಕ್ಕಟ್ಟೆ: ಮಾಲಾಡಿ ಹಾಡಿಯಲ್ಲಿ ಕಪ್ಪು ಚಿರತೆ ಪ್ರತ್ಯಕ್ಷ
Update: 2025-10-09 19:33 IST
ಕುಂದಾಪುರ, ಅ.9: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಪಂ ವ್ಯಾಪ್ತಿಯ ಮಾಲಾಡಿ ಎಂಬಲ್ಲಿ ಲಕ್ಷ್ಮಣ ಪೂಜಾರಿ ಎಂಬವರ ಮನೆಯ ಮುಂಭಾಗ ಮಂಗಳವಾರ ಕಪ್ಪು ಚಿರತೆಯೊಂದು ಪ್ರತ್ಯಕ್ಷವಾಗಿದೆ.
ಮಾಲಾಡಿ, ಅರೆಬೈಲು, ಪಾಟೇಲರಬೆಟ್ಟು ಇನ್ನಿತರ ಕಡೆ ಚಿರತೆ ಸಂಚಾರ ಸಾಮಾನ್ಯವಾಗಿ ಕಂಡುಬರುತ್ತಿದ್ದು, ಆ ಭಾಗದ ನಿವಾಸಿಗಳಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ. ಪಾಟೇಲರಬೆಟ್ಟು ನಾಗರಾಜ ಪೂಜಾರಿ ಎಂಬವರ ಮನೆಯ ಸಾಕು ನಾಯಿ ಮೇಲೆ ಚಿರತೆ ದಾಳಿ ನಡೆಸಿ ಅರೆಬರೆ ತಿಂದು ಅಲ್ಲೇ ಸಮೀಪದಲ್ಲಿ ಬಿಟ್ಟುಹೋಗಿದೆ.
8 ಚಿರತೆ ಸೆರೆ: ಮಾಲಾಡಿ ಭಾಗದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದೀಚೆಗೆ ಈವರೆಗೆ ಸುಮಾರು 8 ಚಿರತೆಗಳನ್ನು ಅರಣ್ಯ ಇಲಾಖೆಯು ಸ್ಥಳೀಯರ ಸಹಕಾರದಿಂದ ಸೆರೆ ಹಿಡಿದಿದೆ. ಪದೇಪದೆ ಚಿರತೆ ಕಾಟದಿಂದ ಎದುರಾಗುವ ಸಮಸ್ಯೆಗೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡು ಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.