ಬೈಂದೂರು ತಾಲೂಕಿನ 20 ಕುಟುಂಬಕ್ಕೆ 94ಸಿ ಅಡಿ ಹಕ್ಕು ಪತ್ರ ವಿತರಣೆ; ಬಾಕಿ ಉಳಿದ ಫಲಾನುಭವಿಗಳಿಗೆ ಶೀಘ್ರ ವಿತರಣೆ: ಶಾಸಕ ಗಂಟಿಹೊಳೆ
ಬೈಂದೂರು: ಬೈಂದೂರು ತಾಲೂಕಿನಲ್ಲಿ ಸರಕಾರಿ ಜಾಗದಲ್ಲಿ ಹಲವಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಾ ಗಿರುವ 20 ಕುಟುಂಬಗಳ ಫಲಾನುಭವಿಗಳಿಗೆ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಇತ್ತೀಚೆಗೆ ತಾಲೂಕು ಕಚೇರಿಯಲ್ಲಿ ಹಕ್ಕು ಪತ್ರ ವಿತರಿಸಿದರು.
ನಂತರ ಮಾತನಾಡಿದ ಶಾಸಕರು, ವಾಸ್ತವ್ಯದ ಹಕ್ಕು ಎಲ್ಲರಿಗೂ ಅಗತ್ಯವಾಗಿ ದೊರಕಬೇಕು. ಹಲವು ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ವಾಸವಾಗಿದ್ದರೂ ಕೂಡ ಹಕ್ಕು ಪತ್ರ ಇಲ್ಲದೇ ಸರಕಾರದ ಯಾವುದೇ ಸೌಲಭ್ಯ ಪಡೆ ಯದೇ ಇರುವ ಕುಟುಂಬಗಳು ಕಳೆದ ಹಲವು ವರ್ಷಗಳಿಂದ ಹಕ್ಕು ಪತ್ರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿ ದ್ದಾರೆ. ಕ್ಷೇತ್ರ ವ್ಯಾಪ್ತಿ ಯಲ್ಲಿ ಯಾವೊಂದೂ 94ಸಿ ಅರ್ಜಿದಾರರು ಹಕ್ಕುಪತ್ರದಿಂದ ವಂಚಿತ ರಾಗದಂತೆ ಅಧಿಕಾರಿ ಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಹಕ್ಕುಪತ್ರ ನೀಡಲು ಕ್ರಮ ವಹಿಸಲಾಗುವುದು ಎಂದರು.
ಅದರಂತೆ ತಾಲೂಕಿನ ಆರು ಗ್ರಾಮಗಳ ಒಟ್ಟು 20 ಮಂದಿ ಅರ್ಹ ಫಲನುಭವಿಗಳಿಗೆ ಹಕ್ಕು ಪತ್ರ ಒದಗಿಸಲಾಗಿದೆ. ಹಳ್ಳಿಹೊಳೆ ಗ್ರಾಮದ 07, ಹೇರೂರು ಗ್ರಾಮದ 09, ಜಡ್ಕಲ್ ಗ್ರಾಮದ 02 ಹಾಗೂ ನಾಡ ಗ್ರಾಮದ 02 ಫಲಾನುಭವಿ ಗಳು ತಮ್ಮ ವಾಸ್ತವ್ಯದ ಮನೆಯಡಿಯ ಭೂಮಿ ಹಕ್ಕು ಪಡೆದುಕೊಂಡಿದ್ದಾರೆ ಎಂದು ಶಾಸಕರು ವಿವರಿಸಿದರು.
ಇವರೆಲ್ಲರಿಗೂ ಮುಂದಿನ ದಿನಗಳಲ್ಲಿ ಸರಕಾರದ ವಸತಿ ಯೋಜನೆಯಡಿ ಯಲ್ಲಿ ಮನೆ ಸೌಲಭ್ಯ ಹಾಗೂ ಇನ್ನಿತರ ಸರಕಾರಿ ಸವಲತ್ತು ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಬಾಕಿ ಉಳಿದ ಅರ್ಹ ಫಲಾನುಭ ವಿಗಳಿಗೂ ತ್ವರಿತವಾಗಿ 94 ಸಿಯಡಿ ಹಕ್ಕು ಪತ್ರ ಮಂಜೂರಾತಿಗೆ ಕ್ರಮ ವಹಿಸಲು ಗುರುರಾಜ್ ಗಂಟಿಹೊಳೆ ಅಧಿಕಾರಿಗಳಿಗೆ ಸೂಚಿಸಿದರು.