×
Ad

ಕುಡಿತದ ಚಟ: ಯುವಕ ಮೃತ್ಯು

Update: 2023-12-07 20:41 IST

ಮಣಿಪಾಲ, ಡಿ.7: ವಿಪರೀತ ಕುಡಿತದ ಚಟ ಹೊಂದಿದ್ದ ಯುವಕನೋರ್ವ ಲೀವರ್ ಸಮಸ್ಯೆಯಿಂದ ಮೃತಪಟ್ಟ ಘಟನೆ ಡಿ.6ರಂದು ಸಂಜೆ ವೇಳೆ ನಡೆದಿದೆ.

ಮೃತರನ್ನು ಶಿವಳ್ಳಿ ಗ್ರಾಮದ ಸಂಜೀವ ಎಂಬವರ ಮಗ ಶರತ್(29) ಎಂದು ಗುರುತಿಸಲಾಗಿದೆ. ವಿಪರೀತ ಕುಡಿತದ ಚಟದಿಂದ ಇವರು ಸರಿಯಾಗಿ ಆಹಾರ ಸೇವಿಸದೇ ಲೀವರ್ ಸಮಸ್ಯೆಯಾಗಿದ್ದು, ವಿಪರೀತ ವಾಂತಿ ಮಾಡಿ ತೀವ್ರವಾಗಿ ಅಸ್ವಸ್ಥಗೊಂಡ ಶರತ್ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News