×
Ad

ಬ್ರಹ್ಮಾವರ ಕೋರ್ಟ್ ಆವರಣದಲ್ಲಿ ವ್ಯಕ್ತಿಗೆ ಹಲ್ಲೆ

Update: 2023-12-17 20:57 IST

ಬ್ರಹ್ಮಾವರ, ಡಿ.17: ವ್ಯಕ್ತಿಯೊಬ್ಬರಿಗೆ ಕಾರು ರಿಕ್ಷಾದಲ್ಲಿ ಬಂದ ಆರೋಪಿಗಳು ಬ್ರಹ್ಮಾವರ ನ್ಯಾಯಾಲಯದ ಆವರಣದಲ್ಲಿಯೇ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಚೇರ್ಕಾಡಿಯ ಅಣ್ಣಯ್ಯ(60) ಎಂಬವರು ನೋಟರಿ ದಾಖಲಾತಿಯನ್ನು ಹಾಜರುಪಡಿಸಲು ಬ್ರಹ್ಮಾವರ ತಾಲೂಕು ವಾರಂಬಳ್ಳಿ ಗ್ರಾಮದ ಎ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಬರುತ್ತಿದ್ದು, ಈ ವೇಳೆ ಕಾರು ಮತ್ತು ರಿಕ್ಷಾದಲ್ಲಿ ಬಂದ ಆರೋಪಿಗಳಾದ ಅಕ್ಕಯ್ಯ, ಮಹೇಶ, ಮಹೇಂದ್ರ, ಮಮತಾ ಎಂಬವರು ನ್ಯಾಯಾಲಯದ ಆವರಣದಲ್ಲಿ ಅಣ್ಣಯ್ಯ ಅವರನ್ನು ತಡೆದು ಹಲ್ಲೆ ಮಾಡಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News