ಆ್ಯಪ್ನಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು
Update: 2023-12-22 22:12 IST
ಉಡುಪಿ, ಡಿ.22: ಟೆಲಿಗ್ರಾಮ್ ಆಪ್ನಲ್ಲಿ ಹಣ ತೊಡಗಿಸಿಕೊಂಡರೆ ಹೆಚ್ಚಿನ ಲಾಭ ನೀಡುವುದಾಗಿ ಲಕ್ಷಾಂತರ ರೂ. ವಂಚಿಸಿ ರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೂಡ ಗ್ರಾಮದ ದಿಲೀಪ್(56) ಎಂಬವರ ವಾಟ್ಸಾಪ್ಗೆ ಟ್ರೇಡಿಂಗ್ ಟಾಸ್ಕ್ ಬಗ್ಗೆ ಸಂದೇಶ ಬಂದಿದ್ದು ತದನಂತರ ದಿಲೀಪ್ ಆ ನಂಬರಿಗೆ ಸಂಪರ್ಕಿದಾಗ ಟೆಲಿಗ್ರಾಮ್ ಆಪ್ನಲ್ಲಿ ಹಣ ತೊಡಗಿಸಿದರೆ, ಹೆಚ್ಚಿನ ಲಾಭಾಂಶದ ನೀಡುವು ದಾಗಿ ನಂಬಿಸಿದ್ದರು. ಅದರಂತೆ ಜೂ.18ರಂದು ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 3,44,200ರೂ. ಆನ್ ಲೈನ್ ಮೂಲಕ ಜಮೆ ಮಾಡಿದ್ದರು. ಆದರೆ ಆರೋಪಿಗಳು ಲಾಭಾಂಶವನ್ನು ನೀಡದೇ ಜಮೆ ಮಾಡಿದ ಹಣವನ್ನೂ ಹಿಂತಿರುಗಿಸದೇ ಮೋಸ ಮಾಡಿರುವು ದಾಗಿ ದೂರಲಾಗಿದೆ.