ಪರ್ಯಾಯ ಮೆರವಣಿಗೆ ವೀಕ್ಷಿಸುತ್ತಿದ್ದ ವ್ಯಕ್ತಿಯ ಸ್ಕೂಟರ್ ಕಳವು
Update: 2024-01-20 20:17 IST
ಉಡುಪಿ: ಉಡುಪಿ ಪರ್ಯಾಯ ಮಹೋತ್ಸವದ ಮೆರವಣಿಗೆ ವೀಕ್ಷಣೆಗಾಗಿ ನಗರದ ಜಿಲ್ಲಾ ಖಜಾನೆಯ ಬಳಿಯ ರಸ್ತೆ ಬದಿಯಲ್ಲಿ ಜ.18ರಂದು ಬೆಳಗಿನ ಜಾವ ೪ಗಂಟೆಗೆ ನಿಲ್ಲಿಸಿದ ಮಲ್ಪೆಯ ದರ್ಶನ್ ಎಂಬವರ ಕೆಎ20 ಎಚ್ಬಿ 6148 ಕಪ್ಪುಬಣ್ಣದ ಸುಜುಕಿ ಆಕ್ಸಿಸ್ ಸ್ಕೂಟರ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.