×
Ad

ಮುರುಡೇಶ್ವರ ಕಡಲ ತೀರ ಪ್ರವಾಸಿಗರಿಗೆ ಮತ್ತೆ ಮುಕ್ತ

Update: 2025-01-01 21:26 IST

ಭಟ್ಕಳ: ಕಳೆದ ವರ್ಷ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದ ಮುರುಡೇಶ್ವರ ಕಡಲ ತೀರವು ಹೊಸ ವರ್ಷದ ಮೊದಲ ದಿನದಂದು ಮತ್ತೆ ಪ್ರವಾಸಿಗರಿಗೆ ತೆರೆಯಲಾಗಿದೆ. ಜಿಲ್ಲಾಡಳಿತವು ಜನವರಿ 1, ಬುಧವಾರ ಸಂಜೆ 5 ಗಂಟೆಯಿಂದ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕಡಲ ತೀರ ಪ್ರವಾಸಿಗರಿಗೆ ಅನುವು ಮಾಡಿಕೊಟ್ಟಿದೆ.

ಕಡಲ ತೀರ ಪ್ರವಾಸಿಗರಿಗೆ ತೆರೆಯುತ್ತಿದ್ದಂತೆಯೇ ನೂರಾರು ಪ್ರವಾಸಿಗರು ಸಮುದ್ರ ತೀರಕ್ಕೆ ಹರಿದುಬಂದರು. ಈ ಹಿಂದೆ ಮುರುಡೇಶ್ವರ ಸ್ಥಳೀಯ ಅಂಗಡಿಕಾರರು ಮತ್ತು ಸಮುದಾಯದ ಕೆಲವರು ಮುರುಡೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಯಾವುದೇ ಅಹಿತಕರ ಘಟನೆಗಳು ಸಂಭವಿಸದಿರಲು ದೇವರ ಆಶೀರ್ವಾದ ಕೋರಿದರು. ನಂತರ, ಸಾಂಪ್ರದಾಯಿಕವಾಗಿ ಇಡುಗಾಯಿ ಒಡೆಯುವುದು ಮತ್ತು ಪಟಾಕಿ ಸಿಡಿಸುವ ಮೂಲಕ ಕಡಲ ತೀರ ಪ್ರವಾಸಿಗರಿಗೆ ತೆರೆಯಲಾಯಿತು.

ಸುರಕ್ಷತಾ ಕ್ರಮಗಳು: ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಪ್ರತ್ಯೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ:

• ಸ್ಪೀಡ್ ಬೋಟ್‌ಗಳು ಮತ್ತು 12 ಮಂದಿ ಲೈಫ್ ಗಾರ್ಡ್‌ಗಳು ನಿಯೋಜಿಸಲ್ಪಟ್ಟಿದ್ದಾರೆ.

• ಲೈಫ್ ಜಾಕೆಟ್‌ಗಳು ಮತ್ತು ಆಕ್ಸಿಜನ್ ಕಿಟ್‌ಗಳ ವ್ಯವಸ್ಥೆ.

• 250 ಮೀಟರ್ ವ್ಯಾಪ್ತಿಯ ಸ್ವಿಮ್ಮಿಂಗ್ ಜೋನ್ ನಿರ್ಮಾಣ.

ಭಟ್ಕಳ ಸಹಾಯಕ ಆಯುಕ್ತರ ಮಾರ್ಗದರ್ಶನದಲ್ಲಿ ಮುರುಡೇಶ್ವರ ಪೊಲೀಸರಿಗೆ ಕಡಲ ತೀರ ಪ್ರವಾಸಿಗರಿಗೆ ತೆರೆಯಲು ಮೌಖಿಕ ಆದೇಶ ನೀಡಲಾಯಿತು. ಆದೇಶದ ಬೆನ್ನಿಗೆ, ಬುಧವಾರ ಸಂಜೆ ಪ್ರವಾಸಿಗರಿಗೆ ಕಡಲ ತೀರ ಪ್ರವೇಶಿಸಲು ಅನುಮತಿ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News