ಅಹಮದಬಾದ್ ಏರ್ ಇಂಡಿಯಾ ವಿಮಾನ ದುರಂತ: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದಿಂದ ಸಂತಾಪ
Update: 2025-06-13 21:49 IST
ಉಡುಪಿ, ಜೂ.13: ಅಹಮದಬಾದ್ ಏರ್ ಇಂಡಿಯಾ ವಿಮಾನ ದುರಂತದ ಬಗ್ಗೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಸಂತಾಪ ವ್ಯಕ್ತಪಡಿಸಿದೆ.
ಇಡೀ ರಾಷ್ಟ್ರದ ಮನಸ್ಸಿಗೆ ಆಘಾತ ನೀಡಿದ ದುರಂತ. ಅನೇಕ ಅಮೂಲ್ಯ ಜೀವಗಳ ನಷ್ಟದಿಂದ ಕೂಡಿದ ಈ ಅಪಾಯದಲ್ಲಿ ಪ್ರಾಣ ಕಳೆದುಕೊಂಡ ಪ್ರಯಾಣಿಕರ ಆತ್ಮಕ್ಕೆ ಶಾಂತಿ ಲಭಿಸಲಿ ಹಾಗೂ ಅವರ ಕುಟುಂಬ ದವರಿಗೆ ಈ ದುಃಖವನ್ನು ಸಹಿಸುವ ಶಕ್ತಿ ದೇವರು ನೀಡಲಿ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್ ಮೌಲಾ ಹಾರೈಸಿದರು.
ಈ ಅಪಘಾತದ ಸತ್ಯ ಅನಾವರಣಗೊಳ್ಳಬೇಕೆಂಬುದು ನಮ್ಮ ಸ್ಪಷ್ಟ ನಿಲುವು. ವಿಮಾನಯಾನ ಕ್ಷೇತ್ರದಲ್ಲಿ ಸುರಕ್ಷತೆ ಮುಂಚೂಣಿಯ ಆದ್ಯತೆ ಆಗಬೇಕು. ಇಂತಹ ದುರ್ಘಟನೆಗಳು ಪುನರಾವೃತ್ತವಾಗದಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.