×
Ad

ವಾರಾಹಿ ಹೊಳೆಗೆ ಬಿದ್ದು ಯುವಕ ಮೃತ್ಯು

Update: 2023-11-28 21:53 IST

ಅಮಾಸೆಬೈಲು : ವಾರಾಹಿ ಹೊಳೆಗೆ ಬಿದ್ದು ಯುವಕನೋರ್ವ ಬಿದ್ದು ಮೃತಪಟ್ಟ ಘಟನೆ ನ.26ರಂದು ಸಂಜೆ ವೇಳೆ ನಡೆದಿದೆ.

ಮೃತರನ್ನು ಹೊಸಂಗಡಿ ಗ್ರಾಮದ ಮಂಜಯ್ಯ ಎಂಬವರ ಮಗ ರಾಘವೇಂದ್ರ (30) ಎಂದು ಗುರುತಿಸಲಾಗಿದೆ. ಕೃಷಿಗೆ ಸಂಬಂಧಿಸಿ ವಾರಾಹಿ ಹೊಳೆ ನೀರಿಗೆ ಅಳವಡಿಸಲಾದ ಪಂಪ್ ಸೆಟ್ ಚಾಲು ಮಾಡಲು ಹೋದ ಇವರು ಅಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದರು. ನ.27ರಂದು ಹುಡುಕಾಟ ನಡೆಸುವ ಇವರ ಮೃತದೇಹ ಹೊಳೆಯ ನೀರಿನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News