×
Ad

ಭಟ್ಕಳ| ಪಿಎಲ್‌ಡಿ ಬ್ಯಾಂಕ್ 23 ಸಿಬ್ಬಂದಿ ನೇಮಕಾತಿ ವಿಚಾರ: ಡಿಆ‌ರ್ ಆದೇಶಕ್ಕೆ ಸಹಕಾರ ಮೇಲ್ಮನವಿ ಪ್ರಾಧಿಕಾರ ತಡೆ

Update: 2025-02-15 20:08 IST

ಭಟ್ಕಳ: ಕಳೆದ 2018ರ ಭಟ್ಕಳ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಸಹಕಾರಿ ಬ್ಯಾಂಕಿನ 23 ಸಿಬ್ಬಂದಿಗಳ ನೇಮಕ ವಿಚಾರ ಮತ್ತು ಖಾಯಂಗೊಳಿಸುವ ಹಾಗೂ ವೇತನ ಸೌಲಭ್ಯದ ಕುರಿತಾದ ಪ್ರಕರಣಕ್ಕೆ ಕಾರವಾರ ಸಹಕಾರಿ ಉಪ ನಿಬಂಧಕರು ನೀಡಿರುವ ಆದೇಶಕ್ಕೆ ಬೆಂಗಳೂರು ಸಹಕಾರ ಮೇಲ್ಮನವಿ ಪ್ರಾಧಿಕಾರ ತಡೆ ನೀಡಿದೆ.

ಈ ಪ್ರಕರಣದ ಕುರಿತಾಗಿ ಮೇಲ್ಮನವಿ ಪ್ರಾಧಿಕಾರದ ಮುಂದೆ ದೂರುದಾರ ಶಂಕರ ನಾಯ್ಕ ಪರ ಹಾಜರಾದ ನ್ಯಾಯವಾದಿ ನಾಗೇಂದ್ರ ನಾಯ್ಕ, ಕಾರವಾರ ಉಪನಿಬಂಧಕರು ನೀಡಿರುವ ಆದೇಶ ಕಾನೂನಿಗೆ ವಿರುದ್ಧವಾದದ್ದು, ಉಪನಿಬಂಧಕರು ದೂರದಾರರ ಹೇಳಿಕೆ, ವಾದ ಆಲಿಸದೇ ತೀರ್ಪು ನೀಡಿರುತ್ತಾರೆ. ಹಾಗೂ ಸಹಕಾರಿ ನಿಯಮವನ್ನು ಉಲ್ಲಂಘಿಸಿ 23 ನೌಕರರ ನೇಮಕಾತಿ ನಡೆದಿದ್ದು, ಸದರಿ ನೌಕರರನ್ನು ಕಾನೂನು ಬಾಹೀರವಾಗಿ ಸಕ್ರಮಗೊಳಿಸಲಾಗಿದೆ. ಅಲ್ಲದೇ ಬ್ಯಾಂಕಿನಿಂದ ಹಣ ಪಡೆದು ಸದರಿ ನೌಕರರಿಗೆ ವೇತನವಾಗಿ ನೀಡಿ ಅಕ್ರಮವೆಸಗಲಾಗಿದೆ ಎಂದು ವಾದಿ ಮಂಡಿಸಿದರು. ನಂತರ ಅರ್ಜಿದಾರರ ಪರ ವಾದ ಆಲಿಸಿದ ಮೇಲ್ಮನವಿ ಪ್ರಾಧಿಕಾರ ಮುಂದಿನ ಆದೇಶದವರೆಗೆ ಕಾರವಾರ ಉಪನಿಬಂಧಕರ ಆದೇಶಕ್ಕೆ ತಡೆ ನೀಡಿದೆ. ಇದರ ವಿರುದ್ಧ ಶಂಕರ ರಾಮಕೃಷ್ಣ ನಾಯ್ಕ ಬೆಟ್ಟೂರು ಕಟಗಾರಕೊಪ್ಪ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.

ಆದೇಶದಲ್ಲಿರುವುದು ಏನು ? ಕಳೆದ 2018, ಮೇ1ರಿಂದ 23 ನೌಕರರು ಸೇವೆ ಸಲ್ಲಿಸುತ್ತಿದ್ದು, 2018 ಏಪ್ರಿಲ್ 27ರ ನಡವಳಿಯಂತೆ ಅವರ ಸೇವೆಯನ್ನು ಖಾಯಂಗೊಳಿಸಲಾಯಿತು. ಸದರಿ ನೌಕರರು ಸತತ 5 ವರ್ಷ 4 ತಿಂಗಳುಗಳ ಕಾಲ ಸೇವೆ ಸಲ್ಲಿಸುತ್ತ ಬ್ಯಾಂಕಿನ ದೈನಂದಿನ ವ್ಯವಹಾರ, ಬ್ಯಾಂಕಿನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 2018 ಅ.5 ರಂದು ಎಲ್ಲ ಅರ್ಜಿದಾರರಿಗೆ ಪ್ರತ್ಯೇಕವಾಗಿ ನೇಮಕಾತಿ ಆದೇಶ ಹೊರಡಿಸಲಇವರಿಗೆ 2018 ಏ.27 ಮತ್ತು 2018 ಅ.5ರ ಬ್ಯಾಂಕಿನ ಆಡಳಿತ ಮಂಡಳಿಯ ಠರಾವು ಯಾವುದೇ ಪ್ರಾಧಿಕಾರದಿಂದ ರದ್ದಾಗಿರುವುದಿಲ್ಲ. ಇವರಿಗೆ ಏಕಾಏಕಿ 2023 ಜು.21 ವಜಾ ಮಾಡುವ ಕುರಿತು ಕಾರಣ ಕೇಳಿ ನೋಟೀಸ್ ನೀಡಿರುವದು ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ನೌಕರರ ಪರ ವಕೀಲರ ವಾದವನ್ನು ಆಲಿಸಿದ ಕಾರವಾರ ಉಪನಿಬಂಧಕ ನ್ಯಾಯಾಲಯ, ಅರ್ಜಿದಾರರು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 70ರ ಅಡಿಯಲ್ಲಿ ದಾಖಲಿಸಿರುವ ಈ ದಾವಾ ಅರ್ಜಿ ಯನ್ನು ಪುಸ್ಕರಿಸಿದೆ. ಅಲ್ಲದೇ 2023 ಜು.27ರಂದು ಅರ್ಜಿದಾರರನ್ನು ಸೇವೆಯಿಂದ ವಜಾಗೊಳಿಸುವ ಕುರಿತು ನೀಡಿದ ನೋಟಿಸನ್ನು ರದ್ದುಗೊಳಿಸಲಾಗಿದೆ. ಅರ್ಜಿದಾರರುಗಳನ್ನು ಈಗಾಗಲೇ ಪ್ರತಿವಾದಿ 1, ಬ್ಯಾಂಕಿನಿಂದ ದಿನಾಂಕ 2018, ಮೇ1ರಿಂದ ಜಾರಿಗೆ ಬರುವಂತೆ ಖಾಯಂಗೊಳಿಸಿರುವ ಆದೇಶವನ್ನು ಮುಂದುವರೆಸಲು ಮತ್ತು ವಾದಿಗಳನ್ನು ಖಾಯಂ ಗೊಳಿಸಿದ ದಿನಾಂಕದಿಂದ ಬ್ಯಾಂಕಿನ ಬೈಲಾದಂತೆ ಅರ್ಜಿದಾರರುಗಳಿಗೆ ಕಾಲಕಾಲಕ್ಕೆ ಅನ್ವಯವಾಗುವ ವೇತನ ಭತ್ಯೆಗಳನ್ನು ನಿಗದಿಪಡಿಸಿ ಆದೇಶದ ದಿನಾಂಕದಿಂದ 60 ದಿನಗಳ ಒಳಗೆ ಜಾರಿಗೆ ಬರತಕ್ಕದ್ದು ಎಂದು ತೀರ್ಪು ನೀಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News