ಯಾದಗಿರಿ | ನಗರದಲ್ಲಿ 69ನೇ ಧಮ್ಮಚಕ್ರ ಪರಿವರ್ತನಾ ದಿನ ಸರಳವಾಗಿ ಆಚರಣೆ
Update: 2025-10-14 15:13 IST
ಯಾದಗಿರಿ: ನಗರದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ 69ನೇ ಧಮ್ಮಚಕ್ರ ಪರಿವರ್ತನಾ ದಿನವನ್ನು ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಶ್ರೀಮಂತ ಚಿನ್ನಾಕರ್ ಮಾತನಾಡಿ, ಧಮ್ಮಚಕ್ರ ಪ್ರವರ್ತನಾ ದಿನವು ಭಾರತದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಿನವಾಗಿದೆ. 1956ರ ಅಕ್ಟೋಬರ್ 14ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು, ಅದೇ ದಿನದಿಂದ ನಾವು ಅಂಬೇಡ್ಕರ್ ಅನುಯಾಯಿಗಳಾಗಿ ಈ ದಿನವನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿದ್ರಾಮಪ್ಪ ಮಾಡಿಗಿ, ಭೀಮಾಶಂಕರ ಈಟೇ, ಬಸವಲಿಂಗಪ್ಪ ಕುರಕುಂಬಳಕರ್, ಮಂಜುನಾಥ ದಾಸನಕೇರಿ, ಭೀಮರಾಯ ಸುಂಗಲಕರ್, (ಡ್ಯಾನಿ) ಸಂಪತ್ ಚಿನ್ನಾಕರ್, ಶ್ರೀಕಾಂತ್ ಸುಂಗಲಕರ್, ಕೇದರನಾಥ ಹುಳ್ಯೆ, ನಾಗರಾಜ್ ಒಡೆಯರ್, ಜಗದೀಶ್ ಚಟ್ಟೇರಕರ್, ಬಸವರಾಜ ದೇವತ್ಗಲ್, ಮಲ್ಲಿಕಾರ್ಜುನ ಕುರಕುಂಬಳಕರ್ ಸೇರಿದಂತೆ ಹಲವರು ಇದ್ದರು.