ಯಾದಗಿರಿ| ಟಂ ಟಂ ರಿಕ್ಷಾ ಪಲ್ಟಿ; ಪುರಸಭೆ ಸಿಬ್ಬಂದಿ ಮೃತ್ಯು
Update: 2025-12-03 14:28 IST
ಕೆಂಭಾವಿ : ಚಾಲಕನ ನಿಯಂತ್ರಣ ತಪ್ಪಿ ಟಂ ಟಂ ವಾಹನ ಪಲ್ಟಿಯಾಗಿ ಪುರಸಭೆ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೆಂಭಾವಿಯಲ್ಲಿ ನಡೆದಿದೆ.
ಪರಸನಹಳ್ಳಿ ಗ್ರಾಮದ ಹಣಮಂತ ಛಲವಾದಿ (45) ಮೃತ ವ್ಯಕ್ತಿ. ಕೆಂಭಾವಿ ಪುರಸಭೆ ಯಲ್ಲಿ ವಾಲ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಎಂದಿನಂತೆ ಬೆಳಿಗ್ಗೆ ಪರಸನಹಳ್ಳಿ ಗ್ರಾಮದಿಂದ ಕೆಂಭಾವಿ ಪುರಸಭೆಗೆ ಕೆಲಸಕ್ಕೆ ಹಾಜರಾಗಲು ಕೆಂಭಾವಿಗೆ ಬರುತ್ತಿರುವಾಗ ಘಟನೆ ನಡೆದಿದೆ.
ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.