×
Ad

ಯಾದಗಿರಿ | ಬಡರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಶಾಸಕ ಕಂದಕೂರ ಸಲಹೆ

ಅರಕೇರಾ (ಬಿ)ಗ್ರಾಮದಲ್ಲಿ ಶಸ್ತ್ರ ಚಿಕಿತ್ಸಾ ಕೋಣೆ ಉದ್ಘಾಟನೆ

Update: 2025-10-27 21:40 IST

ಯಾದಗಿರಿ: ಆಸ್ಪತ್ರೆಗೆ ಬರುವ ಬಡರೋಗಿಗಳಿಗೆ ಉತ್ತಮ‌ ಚಿಕಿತ್ಸೆ ನೀಡುವ ಮೂಲಕ ತಮ್ಮ ಸೇವೆಯನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ಶಾಸಕ ಶರಣಗೌಡ ಕಂದಕೂರ ವೈದ್ಯರಿಗೆ ಕಿವಿ ಮಾತು ಹೇಳಿದರು.

ತಾಲೂಕಿನ ಅರಕೇರಾ(ಬಿ) ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಶಸ್ತ್ರ ಚಿಕಿತ್ಸಾಲಯದ ಕೋಣೆಯನ್ನು ಉದ್ಘಾಟಿಸಿದ ಶಾಸಕರು, ಸರ್ಕಾರಿ ದವಾಖಾನಿಗಳಿಗೆ ಬರುವವರು ಬಡವರೇ ಆಗಿರುತ್ತಾರೆ. ಅವರಿಗೋಸ್ಕರವೇ ಸರ್ಕಾರಗಳು‌ ಇಂತಹ ವ್ಯವಸ್ಥೆ ಮಾಡಿರುತ್ತದೆ. ಕಾರಣ, ನಿಗದಿತ ಅವಧಿಯಲ್ಲಿ ರೋಗಕ್ಕೆ ತಕ್ಕ ಚಿಕಿತ್ಸೆ ನೀಡುವ ಮೂಲಕ ತಾವುಗಳು ಎರಡನೇ ದೇವರಾಗಬೇಕೆಂದು ಮಾರ್ಮಿಕವಾಗಿ ಹೇಳಿದರು.

ಇಲ್ಲಿ ಇನ್ನೂ ಏನಾದರೂ ಸೌಲಭ್ಯಗಳು ಬೇಕಾದರೇ ತಮ್ಮ ಗಮನಕ್ಕೆ ತಂದರೇ ಅವುಗಳನ್ನು ಒದಗಿಸುವ ನಿಟ್ಟಿನಲ್ಲಿ‌ ಪ್ರಯತ್ನ ಮಾಡಲಾಗುವುದೆಂದರು.

ಪರಮಾನಂದೇಶ್ವರ ಶ್ರೀಗಳು ಮಾತನಾಡಿದರು.

ಡಿಎಚ್ ಒ ಡಾ.ಮಹೇಶ ಬಿರಾದಾರ, ಡಾ.ಎಂ.ಎಸ್.ಪಾಟೀಲ್, ಡಾ.ಜ್ಯೋತಿ ಕಟ್ಟಿಮನಿ, ಡಾ.ಹಣಮಂತರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ. ನೀಲಾಂಬಿಕಾ ಎಂ.ಜಾಪಟ್ಟಿ, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News