Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
  4. ಇಮಾಮ್ ಘಝಾಲಿ ಅವರ ಅಮೃತ ನುಡಿಗಳು

ಇಮಾಮ್ ಘಝಾಲಿ ಅವರ ಅಮೃತ ನುಡಿಗಳು

ಎ. ಹಾಜಿರಾ, ಪುತ್ತಿಗೆಎ. ಹಾಜಿರಾ, ಪುತ್ತಿಗೆ27 Dec 2024 9:18 PM IST
share

ಇಮಾಮ್ ಅಬೂ ಹಾಮಿದ್ ಅಲ್ ಘಝಾಲಿ (1057 -1111) ಮುಸ್ಲಿಮ್ ಜಗತ್ತಿನಲ್ಲಿ ಅತ್ಯಂತ ವಿಖ್ಯಾತ, ಜನಪ್ರಿಯ ಹಾಗೂ ಗೌರವಾನ್ವಿತ ವಿದ್ವಾಂಸರಲ್ಲೊಬ್ಬರು. ಇರಾನ್ನ ತೂಸ್ ಪ್ರಾಂತದಲ್ಲಿ ಜನಿಸಿದ ಇಮಾಮ್ ಘಝಾಲಿಯವರು ಇಸ್ಲಾಮೀ ತತ್ವಶಾಸ್ತ್ರ, ಕಾನೂನು ಶಾಸ್ತ್ರ, ಅಧ್ಯಾತ್ಮ ಇತ್ಯಾದಿ ಕ್ಷೇತ್ರಗಳಿಗೆ ನೀಡಿದ ಅತ್ಯಮೂಲ್ಯ ಕೊಡುಗೆಗಳನ್ನು ಜಗತ್ತಿನ ಹೆಚ್ಚಿನ ಭಾಗಗಳಲ್ಲಿ ಇಂದಿಗೂ ಭಾರೀ ಗೌರವದೊಂದಿಗೆ ಸ್ಮರಿಸಲಾಗುತ್ತದೆ.

"ನಿಮ್ಮ ಕಣ್ಣಿಗೆ ಕಾಣಿಸದ ಹದಿಮೂರು ಶತ್ರುಗಳ ವಿರುದ್ಧ ಹೋರಾಡಿರಿ: ಅಹಂಕಾರ, ಉದ್ಧಟತನ, ಕಾಪಟ್ಯ, ಸ್ವಾರ್ಥ, ಲೋಭ, ಜಿಪುಣತೆ, ಲೈಂಗಿಕ ಭೋಗಾಪೇಕ್ಷೆ, ಅಸಹನೆ, ಕೋಪ, ಸುಳ್ಳು, ವಂಚನೆ, ವದಂತಿ, ದೂಷಣೆ."

"ಆಶೆಯು ದೊರೆಗಳನ್ನು ದಾಸರಾಗಿಸಿ ಬಿಡುತ್ತದೆ.

ಅದೇ ವೇಳೆ, ಸಹನೆಯು ದಾಸರನ್ನು ದೊರೆಗಳಾಗಿಸುತ್ತದೆ."

"ನೀರ ಹನಿಯ ಸಾರ್ಥಕತೆ ಅಡಗಿರುವುದು ನದಿಯನ್ನು ಸೇರಿಕೊಳ್ಳುವುದರಲ್ಲಿ"

"ಮಣ್ಣಿನೊಳಗೆ ಅಡಗಿರುವ ಬೀಜದಂತೆ, ಜ್ಞಾನವು ಮನುಷ್ಯನ ಚೇತನದಲ್ಲಿ ಅಡಗಿರುತ್ತದೆ - ಕಲಿಯುವ ಪ್ರಕ್ರಿಯೆಯು ಅದನ್ನು ಪ್ರತ್ಯಕ್ಷಗೊಳಿಸುತ್ತದೆ."

"ಮನುಷ್ಯನು ಪ್ರತಿದಿನ ತನ್ನ ಚಿತ್ತದೊಡನೆ ಹೀಗೆ ಹೇಳಬೇಕು: ನೋಡು, ದೇವರು ಇಂದು ನಿನಗೆ ಇಪ್ಪತ್ತನಾಲ್ಕು ಖಜಾನೆಗಳನ್ನು ನೀಡಿದ್ದಾನೆ. ಅವುಗಳಿಂದ ಗರಿಷ್ಠ ಲಾಭ ಪಡೆ. ಆ ಪೈಕಿ ಒಂದು ಕೂಡಾ ಒಮ್ಮೆ ಕಳೆದು ಹೋದರೆ ಅದನ್ನು ಮತ್ತೆ ಗಳಿಸಲು ನಿನಗೆಂದೂ ಸಾಧ್ಯವಾಗದು. ಮಾತ್ರವಲ್ಲ ಅದನ್ನು ಕಳೆದುಕೊಂಡ ಬಗ್ಗೆ ನೀನು ಪರಿತಪಿಸತೊಡಗಿದಾಗ ನಿನಗಾಗುವ ಸಂಕಟವನ್ನು ಸಹಿಸಿಕೊಳ್ಳಲಿಕ್ಕೂ ನಿನಗೆಂದೂ ಸಾಧ್ಯವಾಗದು."

"ನನ್ನದೇ ಚೇತನದ ಜೊತೆ ನಾನು ನಡೆಸಿದ ವ್ಯವಹಾರವು ನನ್ನ ಅತ್ಯಂತ ಕಠಿಣ ವ್ಯವಹಾರವಾಗಿತ್ತು. ಅದು ಕೆಲವೊಮ್ಮೆ ನನಗೆ ಸಹಾಯಕವಾಗಿದ್ದರೆ, ಕೆಲವೊಮ್ಮೆ ಪ್ರತಿಕೂಲವಾಗಿತ್ತು."

ಸಂಗ್ರಹ - ಕನ್ನಡಾನುವಾದ: ಎ. ಹಾಜಿರಾ, ಪುತ್ತಿಗೆ

share
ಎ. ಹಾಜಿರಾ, ಪುತ್ತಿಗೆ
ಎ. ಹಾಜಿರಾ, ಪುತ್ತಿಗೆ
Next Story
X