ʼವಾರ್ತಾಭಾರತಿʼ ಕನ್ನಡ ಸುದ್ದಿ ಮಾಧ್ಯಮದಲ್ಲಿ ವಿಷೇಶ ಛಾಪು ಮೂಡಿಸಿದೆ: AKKA ಸಂಘಟನೆ ಅಧ್ಯಕ್ಷ ಮಧು ರಂಗಯ್ಯ
ವಾರ್ತಾಭಾರತಿಗೆ 24ರ ಸಂಭ್ರಮ

ಅಮೆರಿಕ: ಕನ್ನಡ ಸುದ್ದಿ ಮಾಧ್ಯಮದಲ್ಲಿ ವಿಷೇಶ ಛಾಪು ಮೂಡಿಸಿರುವ ವಾರ್ತಾಭಾರತಿ ಪತ್ರಿಕೆಯು 24 ವರ್ಷ ಗಳನ್ನು ಪೂರ್ಣಗೊಳಿಸಿ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂಧರ್ಭದಲ್ಲಿ ನಾನು ಶುಭ ಹಾರೈಸುತ್ತೇನೆ.
ವಸ್ತುನಿಷ್ಠ ಹಾಗೂ ಜನರ ಧ್ವನಿಯ ಸುದ್ದಿಸಂಸ್ಥೆಯಾಗಿ ವಾರ್ತಾಭಾರತಿ ಕನ್ನಡ ಓದುಗರ ಹೃದಯದಲ್ಲಿ ನಂಬಿಕೆಯ ಸ್ಥಾನ ಪಡೆದಿದೆ.
ಸೆ. 4-6ರವರೆಗೆ ಅಮೆರಿಕದ ಫಿಲಡೆಲ್ಫಿಯದಲ್ಲಿ ಅಕ್ಕ ಸಂಸ್ಥೆಯು ತನ್ನ 25 ವರ್ಷಗಳ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿ ರುವ ಸಂದರ್ಭ ವಾರ್ತಾಭಾರತಿಯು ಸಹ ಮುಂದಿನ ವರ್ಷ ತನ್ನ 25 ವರ್ಷಗಳನ್ನು ಪೂರೈಸಿ ವಿಜೃಂಭಣೆಯಿಂದ ರಜತಮಹೋತ್ಸವವನ್ನು ಆಚರಿಸುವಂತಾಗಲಿ ಎಂದು ಶುಭ ಕೋರುತ್ತೇನೆ.
-ಮಧು ರಂಗಯ್ಯ, ಅಮೆರಿಕದ ಕನ್ನಡ ಸಂಘಟನೆಗಳ ಕೂಟ ʼAKKAʼ ಅಧ್ಯಕ್ಷ
Next Story




