ಮಂಗಳೂರು: ಎಬಿವಿಪಿಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಎನ್ಎಸ್ಯುಐಗೆ ಸೇರ್ಪಡೆ

ಮಂಗಳೂರು, ಆ.13: ಎನ್ಎಸ್ಯುಐ ತತ್ವ, ಸಿದ್ಧಾಂತವನ್ನು ಒಪ್ಪಿ ನಗರದ ಎಬಿವಿಪಿಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಎನ್ಎಸ್ಯುಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಅವರ ನೇತೃತ್ವದಲ್ಲಿ ಮಲ್ಲಿಕಟ್ಟೆಯ ಇಂದಿರಾ ಕಾಂಗ್ರೆಸ್ ಭವನದಲ್ಲಿ ಬುಧವಾರ ಎನ್ಎಸ್ಯುಐ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮನಪಾ ಮಾಜಿ ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ, ಡಿಸಿಸಿ ಮಾಧ್ಯಮ ವಕ್ತಾರ ಉದಯ್ ಆಚಾರ್ ಉಪಸ್ಥಿತರಿದ್ದರು.
ಹಾಗೂ ಪವನ್ ಶೆಟ್ಟಿ ಅವರನ್ನು ಜಿಲ್ಲಾ ಎನ್ಎಸ್ಯುಐ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳಿಸಲಾಯಿತು.
Next Story







