ವಿಪತ್ತು ನಿರ್ವಹಣೆ: ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ
ಮಂಗಳೂರು : ದ.ಕ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಸಹಯೋಗದೊಂದಿಗೆ ನಗರದ ಎ.ಜೆ. ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ ಮಂಗಳವಾರ ವಿಪತ್ತು ನಿರ್ವಹಣೆ ತರಬೇತಿ ಕಾರ್ಯಕ್ರಮ ನಡೆಯಿತು.
ಅಪರ ಜಿಲ್ಲಾಧಿಕಾರಿ ರಾಜು ಕೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಡೀನ್ ಡಾ. ಅಶೋಕ್ ಹೆಗ್ಡೆ, ಅಸೋಸಿಯೇಟ್ ಡೀನ್ ಡಾ. ಸುಶಿತ್, ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ಸಚ್ಚಿದಾನಂದ, ಎಚ್ಒಡಿ ಡಾ. ಸಂಜೀವ್ ಬಡಿಗೇರ್, ಪ್ರಾಧ್ಯಾಪಕ ಡಾ. ಮರಿಯಾ ಎನ್., ಸಂಘಟನಾ ಕಾರ್ಯದರ್ಶಿ ಡಾ. ಪ್ರದೀಪ್ ಸೇನಾಪತಿ ಉಪಸ್ಥಿತರಿದ್ದರು.
ತರಬೇತಿಯಲ್ಲಿ ದೃಶ್ಯ ಸುರಕ್ಷತೆ ಮತ್ತು ವೈಯಕ್ತಿಕ ರಕ್ಷಣೆ, ಬಲಿಪಶುಗಳ ರಕ್ಷಣೆ ಮತ್ತು ಸಾರಿಗೆ ತಂತ್ರಗಳು, ಪ್ರಮುಖ ಘಟನೆ ಮತ್ತು ಪತ್ತು ನಿರ್ವಹಣೆ, ವೈದ್ಯಕೀಯ ಪ್ರತಿಕ್ರಿಯೆ ಮತ್ತು ಸಿಬಿಆರ್ಎನ್ (ರಾಸಾಯನಿಕ, ಜೈವಿಕ, ಕಿರಣಶೀಲ ಮತ್ತು ಪರಮಾಣು) ತುರ್ತುಸ್ಥಿತಿಗಳನ್ನು ಒಳಗೊಂಡ ನೇರ ಪ್ರದರ್ಶನಗಳು ಮತ್ತು ಪ್ರಾಯೋಗಿಕ ಅವಧಿಗಳು ಇತ್ತು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ತಿಮ್ಮಯ್ಯ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜಯಕುಮಾರ್, ಇನ್ಸ್ಪೆಕ್ಟರ್ ಶಾಂತಿ ಲಾಲ್ ಜತಿಯಾ ನೇತೃತ್ವದ ಎನ್ಡಿಆರ್ಎಫ್ ತಂಡದ 10ನೇ ಬೆಟಾಲಿಯನ್ ಸಹಿತ ಪ್ರಮುಖರು ಪಾಲ್ಗೊಂಡಿದ್ದರು.







