ದಸರಾ ಸಿಎಂ ಕಪ್-ರಾಜ್ಯಮಟ್ಟದ ಸ್ಪರ್ಧೆ: ಮಂಗಳೂರಿನ ಹರ್ಷಲ್ಗೆ ಬೆಳ್ಳಿಯ ಪದಕ

ಮಂಗಳೂರು, ಸೆ.24:ಮೈಸೂರಿನಲ್ಲಿ ಬುಧವಾರ ನಡೆದ ದಸರಾ ಸಿಎಂ ಕಪ್ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ತೌಲೋ ವಿಭಾಗದಲ್ಲಿ ನಗರದ ಬೋಂದೆಲ್ ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಹರ್ಷಲ್ ಎನ್. ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.
ಇತ್ತೀಚೆಗೆ ಉಡುಪಿಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಹರ್ಷಲ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಪಚ್ಚನಾಡಿ ಬಂಗೇರುಸೀಮೆಯ ನಿವಾಸಿ ನವೀನ್ಚಂದ್ರ ಮತ್ತು ಜಯಶ್ರೀ ದಂಪತಿಯ ಪುತ್ರನಾಗಿರುವ ಇವರು ನಗರದ ಇಮ್ಮೋರ್ಟಲ್ ಮಾರ್ಷಲ್ ಆಟ್ಸ್ಆ್ಯಂಡ್ ಫಿಟ್ನೆಸ್ ಅಕಾಡಮಿಯ ತರಬೇತುದಾರ ರೋಹನ್ ಎಸ್.ಬಳಿ ತರಬೇತಿ ಪಡೆಯುತ್ತಿದ್ದಾರೆ.
Next Story





