ಪಶ್ಚಿಮ ಬಂಗಾಳದಲ್ಲಿ ಸ್ವಚ್ಛ ಮಂಗಳೂರು ಅಭಿಯಾನ ಜನಪ್ರಿಯ: ಸ್ವಾಮಿ ವಿದ್ಯಾಮೃತನಂದಜಿ

ಮಂಗಳೂರು, ಅ.5: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಅಕ್ಟೋಬರ್ ತಿಂಗಳ ಸ್ವಚ್ಛತಾ ಶ್ರಮದಾನವು ಮಂಗಳೂರು ಕ್ಲಾಕ್ ಟವರ್ ಸುತ್ತಮುತ್ತಲಿನ ಪ್ರದೇಶದಲ್ಲಿ ರವಿವಾರ ನಡೆಯಿತು.
ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಹಯೋಗದೊಂದಿಗೆ ನಡೆದ ಅಭಿಯಾನದಲ್ಲಿ ಕೋಲ್ಕತ್ತಾದ ರಾಮಕೃಷ್ಣ ಮಿಷನ್ ಶಾರದಾ ಪೀಠದ ಸ್ವಾಮಿ ವಿದ್ಯಾಮೃತನಂದಜಿ ಮತ್ತು ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಯುಗೇಶಾನಂದರು ಜಂಟಿಯಾಗಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮಿ ವಿದ್ಯಾಮೃತಾನಂದಜಿ ‘‘ ಪಶ್ಚಿಮ ಬಂಗಾಳದಲ್ಲಿ ಸ್ವಚ್ಛ ಮಂಗಳೂರು ಅಭಿಯಾನ ಜನಪ್ರಿಯವಾಗಿದೆ. ಈ ಕಾರ್ಯದಲ್ಲಿ ಮಂಗಳೂರಿನ ಜಾಗೃತ ನಾಗರಿಕರು ರಾಮಕೃಷ್ಣ ಮಠದ ಮಾರ್ಗದರ್ಶನದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ನೋಡಿ ನನಗೆ ತುಂಬ ಸಂತೋಷವಾಗಿದೆ. ನಮೆಲ್ಲರಿಗೂ ಸ್ವಚ್ಛತೆಯ ಬಗ್ಗೆ ಸಹಜವಾಗಿ ಆಸಕ್ತಿ ಇದೆ, ಆದರೆ ಸಾಮಾನ್ಯವಾಗಿ ನಮ್ಮ ಮನೆಯ ಆವರಣದವರೆಗೆ ಮಾತ್ರ ಸ್ವಚ್ಛತೆ ಸೀಮಿತವಾಗಿರುತ್ತದೆ. ನಾವು ಸಾರ್ವಜನಿಕ ಸ್ಥಳಗಳನ್ನೂ ನಮ್ಮದಾಗಿ ಕಾಣುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನೇತೃತ್ವದಲ್ಲಿ ಅಶೋಕ್ ಸುಬ್ಬಯ್ಯ,ಕೃಷ್ಣ ಭವನ ಆಟೋ ಪಾರ್ಕ್ನ ಅಧ್ಯಕ್ಷ ರಾಜೇಂದ್ರ , ಕಾರ್ಯದರ್ಶಿ ನವೀನ್ ಕುಮಾರ್, ಪುರಷೋತ್ತ್ತಮ್, ರೂಪೇಶ್, ಆನಂದ ಕುಲಾಲ್, ಶಿವರಾಂ ಮತ್ತು ಸತ್ಯನಾರಾಯಣ ಕೆ. ವಿ ತಂಡದವರು ಕ್ಲಾಕ್ ಟವರ್ ವೃತ್ತದ ಜೊತೆಗೆ ಮಿನಿ ವಿಧಾನಸೌಧದ ಪಾದಚಾರಿ ಮಾರ್ಗವನ್ನು ಸ್ವಚ್ಛಗೊಳಿಸಿದರು.
ಹಿರಿಯ ಸ್ವಯಂಸೇವಕರಾದ ಕಮಲಾಕ್ಷ ಪೈ ನೇತೃತ್ವದಲ್ಲಿ ಡಾ. ರಾಜೇಂದ್ರ ಪ್ರಸಾದ್, ಎಂ. ರಾಮಚಂದ್ರ ಭಟ್, ರವೀಂದ್ರನಾಥ ನಾಯಕ್, ಬಬಿತಾ ಶೆಟ್ಟಿ, ರಾಜೀವಿ ಚಂದ್ರಶೇಖರ್, ಸುನಂದಾ, ನಾಗೇಶ್, ಅನಿರುದ್ಧ ನಾಯಕ್, ದಾಮೋದರ ಭಟ್, ಗೋಪಿನಾಥ್ ರಾವ್, ಗಣಪತಿ ಎಸ್. ನಾಯಕ್, ರಮೇಶ್ ಪೈ,ವಿಠ್ಠಲ ಪ್ರಭು, ಪುಂಡಲೀಕ ಶೆಣೈ, ಪಿ.ಜಿ ವೆಂಕಟ್ ರಾವ್, ಗೋಪಾಲ್ ಭಟ್, ಸುಕುಮಾರ ಎಸ್. ಸಾಲಿಯನ್ ಇವರನ್ನು ಒಳಗೊಂಡ ತಂಡ ಕ್ಲಾಕ್ ಟವರ್ ಮುಂಭಾಗದಿಂದ ಪ್ರಾರಂಭಿಸಿ ಹಂಪನಕಟ್ಟೆ ವೃತ್ತದವರೆಗಿನ ಡಿವೈಡರ್ಗಳನ್ನೂ ,ದಿಲ್ ರಾಜ್ ಆಳ್ವ, ಬಾಲಕೃಷ್ಣ ಭಟ್, ಹಿಮ್ಮತ್ ಸಿಂಗ್, ಅವಿನಾಶ್, ವಿಜೇಶ್ ದೇವಾಡಿಗ, ರಾಘವೇಂದ್ರ ಕಲ್ಲೂರ್ ಕ್ಲಾಕ್ ಟವರ್ ಸ್ವಚ್ಛಗೊಳಿಸಿದರು.ಮತ್ತೊಂದೆಡೆ ಉದಯ ಕುಮಾರ್ ಕೆ.ಪಿ ಮತ್ತು ತಂಡದವರು ಅನಧಿಕೃತ ಬ್ಯಾನರ್ಗಳನ್ನು ತೆರವುಗೊಳಿಸಿದರು.
ಕಾಂಪೌಂಡ್ ಗೋಡೆಗಳಲ್ಲಿರುವ ಬಿತ್ತಿಚಿತ್ರಗಳ ಸ್ವಚ್ಛತೆ:ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ ವಿದ್ಯಾರ್ಥಿ ಗಳ ತಂಡವು ಡಾ.ಧನೇಶ್ ಕುಮಾರ್ ಮತ್ತು ಡಾ. ರುಚಿತಾ ನರ್ಸಿಯಾ ತಂಡದವರು ವಿಶ್ವವಿದ್ಯಾನಿಲಯ ಕಾಲೇಜಿನ ಕಾಂಪೌಂಡ್ ಗೋಡೆಗಳಲ್ಲಿರುವ ಬಿತ್ತಿಚಿತ್ರಗಳನ್ನು ಸ್ವಚ್ಛಗೊಳಿಸಿದರು.







