ನ್ಯಾಯವಾದಿ ವಿಜಯಕುಮಾರ್ ಸ್ಮರಣಾರ್ಥ ಕಾರ್ಕಳ ಬಾಹುಬಲಿ ಬೆಟ್ಟಕ್ಕೆ ವಿದ್ಯುತ್ ದೀಪ ಜೋಡಣೆ : ರಾಜೇಂದ್ರ ಕುಮಾರ್

ಮಂಗಳೂರು , ಅ.23: ಕಾರ್ಕಳದ ಹಿರಿಯ ನ್ಯಾಯವಾದಿ ಜೈನ ಧರ್ಮ ಜೀರ್ಣೋದ್ಧಾರಕ ಸಂಘ (ರಿ) ಕಾರ್ಕಳ ಇದರ ಪ್ರಧಾನ ಕಾರ್ಯದರ್ಶಿ , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಕೆ. ವಿಜಯ ಕುಮಾರ್ ಅವರು ಇತ್ತೀಚೆಗೆ ನಿಧನರಾಗಿದ್ದು ಇವರು ಸಮಾಜ ಸೇವಾ ಕಾರ್ಯಗಳು ಮಾದರಿಯಾಗಿದ್ದು ಮಾತ್ರವಲ್ಲ ಅವರ ಹೆಸರು ಶಾಶ್ವತವಾಗಿ ಉಳಿಯುವಂತಾಗಬೇಕು ಎಂದು ಎಸ್ ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಕಾರ್ಕಳದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ದಿವಂಗತ ಎಂ.ಕೆ. ವಿಜಯ ಕುಮಾರ್ ಅವರ ವ್ಯಕ್ತಿತ್ವದ ಸ್ಮರಣೆ ಮಾಡಿದ್ದಾರೆ. ಸದಾ ಸಮಾಜ ಚಿಂತನೆಯ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸ್ನೇಹಪರ ವ್ಯಕ್ತಿತ್ವ ದೊಂದಿಗೆ ಎಲ್ಲರೊಂದಿಗೆ ಬೆರೆಯುತ್ತಿದ್ದ ಎಂ.ಕೆ.ವಿಜಯ ಕುಮಾರ್ ಅವರ ಹೆಸರು ಶಾಶ್ವತವಾಗಿ ಉಳಿಸುವ ನಿಟ್ಟಿ ನಲ್ಲಿ ಕಾರ್ಕಳದ ಬಾಹುಬಲಿ ಬೆಟ್ಟದಲ್ಲಿ ಸುಮಾರು 10 ಲಕ್ಷ ವೆಚ್ಚದಲ್ಲಿ ವಿದ್ಯುತ್ ದೀಪದ ವ್ಯವಸ್ಥೆಯನ್ನು ತನ್ನ ಸ್ವಂತ ಖರ್ಚಿನಲ್ಲಿ ನಡೆಸಲಾಗುವುದು ಎಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.





