ಮೂಡುಬಿದಿರೆ: ಅಗ್ನಿಪಥ್ ಸೇನಾ ನೇಮಕಾತಿ ರ್ಯಾಲಿ ಆರಂಭ

ಮೂಡುಬಿದಿರೆ : ಫೆಬ್ರವರಿ 9ರವರೆಗೆ ನಡೆಯಲಿರುವ ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನಾ ನೇಮಕಾತಿ ರ್ಯಾಲಿಯು ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಶುಕ್ರವಾರ ಶುಭಾರಂಭಗೊಂಡಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹಸಿರು ನಿಶಾನೆ ತೋರುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು.
ಮಂಗಳೂರು ವಿಭಾಗದ ಬ್ರಿಗೇಡಿಯರ್ ಎಸ್.ಕೆ ಸಿಂಗ್, ನೇಮಕಾತಿ ವಿಭಾಗದ ಮುಖ್ಯಸ್ಥ ಜಿ.ಸೋಮು ಮಹಾರಾಜನ್ ಹಾಗೂ ಇತರ ಸೇನಾಧಿಕಾರಿಗಳು ಉಪಸ್ಥಿತರಿದ್ದರು. ಮೊದಲ ದಿನ ಆಯ್ಕೆ ಪ್ರಕ್ರಿಯೆಲ್ಲಿ ವಿಜಯಪುರ ಜಿಲ್ಲೆಯ 650 ಮಂದಿ ಆಕಾಂಕ್ಷಿಗಳು ಪಾಲ್ಗೊಂಡಿದ್ದರು. ಮೊದಲ ದಿನ ಒಂದುವರೆ ಕಿ.ಮೀ ನಡಿಗೆ, ಅಡೆತಡೆ ಓಟ, ಎತ್ತರ ಜಿಗಿತ, ದೈಹಿಕ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆಗಳು ನಡೆದವು.
Next Story





