ಅ. 11ರಂದು ಸುಳ್ಯದಲ್ಲಿ ಶಹೀದ್ಗೆ ತೆಕ್ಕಿಲ್ಗೆ ಅಭಿನಂದನಾ ಸಮಾರಂಭ

ಮಂಗಳೂರು, ಅ.9: ಕರ್ನಾಟಕ ಸರ್ಕಾರ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ನೇಮಕ ಗೊಂಡು ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿರುವ ಟಿ. ಎಂ. ಶಹೀದ್ ತೆಕ್ಕಿಲ್ಗೆ ಸುಳ್ಯ ಲಯನ್ಸ್ ಸೇವಾ ಸದನ ದಲ್ಲಿ ಅ.11ರ ಸಂಜೆ 4 ಗಂಟೆಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದು ಅಭಿನಂದನಾ ಸಮಿತಿ ಪದಾಧಿಕಾರಿಗಳಾದ ಸದಾನಂದ ಮಾವಜಿ ಮತ್ತು ಕೆ. ಎಂ. ಮುಸ್ತಫ ತಿಳಿಸಿದ್ದಾರೆ.
Next Story





