ಕರ್ನಾಟಕ ಅಂಡರ್-15 ಬ್ಯಾಡ್ಮಿಂಟನ್ ಟೂರ್ನಿ: ಡಬಲ್ಸ್ನಲ್ಲಿ ಮಂಗಳೂರಿನ ಕಿಯಾನ್ಗೆ ಚೊಚ್ಚಲ ಪ್ರಶಸ್ತಿ
ಮಂಗಳೂರು, ಜು.9: ಮಂಗಳೂರಿನ ಎಸ್ಬಿಎ ಬ್ಯಾಡ್ಮಿಂಟನ್ ಅಕಾಡೆಮಿಯ ಉದಯೋನ್ಮುಖ ಯುವ ಪ್ರತಿಭೆ ಕಿಯಾನ್ ಪಿ.ಸಿ. ಯೋನೆಕ್ಸ್ -ಸನ್ರೈಸ್ ಕರ್ನಾಟಕ ರಾಜ್ಯ ರ್ಯಾಂಕಿಂಗ್ ಟೂರ್ನಿಯ ಅಂಡರ್-15 ಬಾಲಕರ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ.
ಶಿವಮೊಗ್ಗದಲ್ಲಿ ಜು.1ರಿಂದ 6ರವರೆಗೆ ಶಟಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಶಿವಮೊಗ್ಗ ಮತ್ತು ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಿಯಾನ್ ತನ್ನ ಜೊತೆಗಾರ ಬೆಂಗಳೂರಿನ ಡಿವೈಇಎಸ್ ಅಕಾಡಮಿಯ ಶಿವಾಂಕ್ ರೊಂದಿಗೆ ಆಡಿ ಚೊಚ್ಚಲ ಪ್ರಶಸ್ತಿ ಜಯಿಸಿದರು.
ಕಿಯಾನ್ರಿಗೆ ಪ್ರಶಸ್ತಿ ಜಯಿಸುವಲ್ಲಿ ಕೋಚ್ ಶ್ರೇಯಸ್ ಸಮರ್ಥ ಮಾರ್ಗದರ್ಶನ ನೀಡಿದ್ದಾರೆ. ರಯೀಝ್ ಪಿ.ಸಿ. ಮತ್ತು ಸಮೀಹ ಮಜೀದ್ ಅವರ ಪುತ್ರ ಕಿಯಾನ್ ಪಿ.ಸಿ.
Next Story