ಮೇ 17,18: ನಚ್ಚಬೆಟ್ಟು ದಾರುಲ್ ಮುಸ್ತಫಾ ಮೋರಲ್ ಅಕಾಡಮಿಯ 8ನೇ ವಾರ್ಷಿಕ, ಸನದುದಾನ ಮಹಾ ಸಮ್ಮೇಳನ
ಪುತ್ತೂರು: ನಚ್ಚಬೆಟ್ಟು ದಾರುಲ್ ಮುಸ್ತಫಾ ಮೋರಲ್ ಅಕಾಡಮಿ ಇದರ 8ನೇ ವಾರ್ಷಿಕ ಹಾಗೂ 3ನೇ ಸನದುದಾನ ಮಹಾ ಸಮ್ಮೇಳನ ಮೇ 17 ಮತ್ತು 18ರಂದು ನಜ್ಜಬೆಟ್ಟುವಿನಲ್ಲಿ ತೋಕೆ ಮುಹಿಯ್ಯುದ್ದೀನ್ ಕಾಮಿಲ್ ಸಖಾಪಿ ಸಾರಥ್ಯದಲ್ಲಿ ನಡೆಯಲಿದೆ ಎಂದು ಅಕಾಡಮಿಯ ಕಾರ್ಯದರ್ಶಿ ಮಹ್ರೂಫ್ ಸುಲ್ತಾನಿ ಆತೂರು ತಿಳಿಸಿದ್ದಾರೆ.
ಅವರು ಗುರುವಾರ ಪುತ್ತೂರು ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೇ 17ರಂದು ರಾತ್ರಿ ಅಸ್ಸಯ್ಯದ್ ತ್ವಾಹಾ ತಂಙಳ್ ಹಾಗೂ ಸಂಗಡಿಗರಿಂದ ಬುರ್ದಾ ಮಜ್ಲೀಸ್ ನಡೆಯಲಿದ್ದು, ಅಸ್ಸಯ್ಯದ್ ಮುಡೀಸ್ ತಂಙಳ್ ಚೇಲಕ್ಕರ ದುವಾ ಶೀರ್ವಚನ ನೀಡಲಿದ್ದಾರೆ. ಮೇ 18ರಂದು ಬೆಳಗ್ಗೆ ಫುರ್ಕಾನಿ ಸಂಗಮ ಹಾಗೂ ಪದವಿ ವಸ್ತ್ರ ವಿತರಣೆ ನಡೆಯಲಿದೆ. ಅಸ್ಸಯ್ಯದ್ ಜಲಾಲುದ್ದೀನ್ ತಂಙಳ್ ಪೊಸೊಟು ವಿಷಯ ಮಂಡನೆ ಮಾಡಲಿದ್ದಾರೆ. ಸಂಜೆ ಗಲ್ಫ್ ಮೀಟ್ ನಡೆಯಲಿದೆ. ಅಥಾವುಲ್ಲಾ ಹಿಮಾಮಿ ಕುಪ್ಪೆಟ್ಟಿ, ಅಬೂಬಕ್ಕರ್ ಮದನಿ ಹೊಸಂಗಡಿ ಜುಬೈಲ್ ಮಾತನಾಡಲಿದ್ದಾರೆ.
ರಾತ್ರಿ ಸಮಾರೋಪ ಸಮಾರಂಭ ನಡೆಯಲಿದೆ. ಕರ್ನಾಟಕ ರಾಜ್ಯ ಜಂಇಯತ್ತುಲ್ ಉಲಮಾ ರಾಜ್ಯಾಧ್ಯಕ್ಷ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಸ್ತುತ ಸಂಗಮವನ್ನು ಕೆ.ಎಸ್. ಆಟ್ಟಕ್ಕೋಯ ತಂಙಳ್ ಕುಂಬೋಳ್ ಉದ್ಘಾಟಿಸಲಿದ್ದಾರೆ. ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಪ್ರಾರ್ಥನೆಗೆ ನೇತೃತ್ವ ವಹಿಸಲಿದ್ದಾರೆ. ಬದ್ರುಸ್ಸಾದಾತ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ಸನದುದಾನ ಪ್ರಧಾನ ಮಾಡಲಿ ದ್ದಾರೆ. ಅಸ್ಸಯ್ಯದ್ ನೂರುಸಾದಾತ್ ಬಾಯಾರ್ ತಂಙಳ್ ಸನದುದಾನ ಭಾಷಣ ಮಾಡಲಿದ್ದಾರೆ. ಹಲವಾರು ಉಲಮಾ ಉಮರಾಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ಸ್ವಾಗತ ಸಮಿತಿ ಸಂಚಾಲಕ ಡಾ. ಉಮರುಲ್ ಫಾರೂಕ್, ಮುಖ್ಯಗುರು ರಾಫಿ ಅಹ್ಸನಿ ಮಲಪ್ಪುರಂ, ಪೂರ್ವ ವಿದ್ಯಾರ್ಥಿ ಅಬೂಬಕ್ಕರ್ ಸುಲ್ತಾನಿ ಮತ್ತು ಎಸ್ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ ಉಪಸ್ಥಿತರಿದ್ದರು.