ಸುರತ್ಕಲ್: ಮಿ. ದಕ್ಷಿಣ ಕನ್ನಡ-2023 ದೇಹದಾರ್ಡ್ಯ ಸ್ಪರ್ಧೆ
![ಸುರತ್ಕಲ್: ಮಿ. ದಕ್ಷಿಣ ಕನ್ನಡ-2023 ದೇಹದಾರ್ಡ್ಯ ಸ್ಪರ್ಧೆ ಸುರತ್ಕಲ್: ಮಿ. ದಕ್ಷಿಣ ಕನ್ನಡ-2023 ದೇಹದಾರ್ಡ್ಯ ಸ್ಪರ್ಧೆ](https://www.varthabharati.in/h-upload/2023/12/10/1221231-jim.webp)
ಸುರತ್ಕಲ್: ಝೆನ್ ಜಿಮ್ ಸುರತ್ಕಲ್ ಹಾಗೂ ದ.ಕ. ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಮಂಗಳೂರು ಜಂಟಿ ಆಶ್ರಯದಲ್ಲಿ ಮಿ. ದಕ್ಷಿಣ ಕನ್ನಡ 2023 ದೇಹದಾರ್ಡ್ಯ ಸ್ಪರ್ಧೆಯು ಶನಿವಾರ ಸಂಜೆ ಇಲ್ಲಿನ ಕರ್ನಾಟಕ ಸೇವಾ ವೃಂದ ಸಭಾಂಗಣದಲ್ಲಿ ಜರುಗಿತು.
ಉದ್ಘಾಟನೆ ನೆರವೇರಿಸಿ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ದೇಶದಲ್ಲಿ ಕ್ರಿಕೆಟ್ ನಂತಹ ಕ್ರೀಡೆಗಳಿಗೆ ಇರುವಷ್ಟು ಪ್ರೋತ್ಸಾಹ ಇಂತಹ ಕ್ರೀಡೆಗಳಿಗಿಲ್ಲ. ಹೀಗಿದ್ದರೂ ಪುಂಡಲೀಕ ಹೊಸಬೆಟ್ಟು ಮತ್ತವರ ತಂಡ ಸಾಕಷ್ಟು ಶ್ರಮವಹಿಸಿ ಸ್ಪರ್ಧೆಯನ್ನು ಆಯೋಜನೆ ಮಾಡಿದೆ. ಇದಕ್ಕಾಗಿ ಅವರಿಗೆ ಅಭಿನಂದನೆಗಳು. ಮುಂದೆಯೂ ಇಂತಹ ಸ್ಪರ್ಧೆ ನಿತ್ಯ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಜಿ. ಶಂಕರ್ ಅವರು ಟ್ರೋಫಿ ಅನಾವರಣಗೊಳಿಸಿ ಬಳಿಕ ಅಖಾಡ ಉದ್ಘಾಟಿಸಿ ಮಾತನಾಡಿದರು. ದ.ಕ. ದೇಹದಾರ್ಡ್ಯ ಸ್ಪರ್ಧಾ ಸಮಿತಿ ಅಧ್ಯಕ್ಷ ಪುಂಡಲೀಕ ಹೊಸಬೆಟ್ಟು, ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಐ. ರಮಾನಂದ ಭಟ್, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಮಾಜಿಕ ರಂಗದಲ್ಲಿ ಸಾಧನೆಗೈದ ವರದರಾಜ್ ಉಳ್ಳಾಲ, ಯಜ್ನೇಶ್ ಬರ್ಕೆ, ನಾರಾಯಣ ಶೆಣೈ ಅವರನ್ನು ಝೆನ್ ಜಿಮ್ ಸುರತ್ಕಲ್ ಹಾಗೂ ದ.ಕ. ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ಸ್ ವತಿಯಿಂದ ಅತಿಥಿಗಳು ಸನ್ಮಾನಿಸಿದರು. ಅಲ್ಲದೆ, ವಿಶೇಷ ಮಕ್ಕಳ ಕ್ರೀಡಾಕೂಟದಲ್ಲಿ ಸಾಧನೆ ಮಾಡಿರುವ ಲಿಖಿತರಾಜ್ ಪುತ್ರನ್, ಹರೀಶ್ ವೆಂಕಟೇಶ್, ನಿಹಾಲ್ ವಿ. ಕರ್ಕೇರ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ದ.ಕ. ಮೊಗವೀರ ಮಹಾಜನ ಸಭಾ ಉಚ್ಚಿಲ ಇದರ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಪಣಂಬೂರು ಕಾಂತೇರಿ ಧೂಮಾವತಿ ದೈವಸ್ಥಾನದ ಆಡಳಿತ ಮೊಕ್ತೇಸರ ಪಿ.ಟಿ. ರೈ, ನಾರಾಯಣ ಶೆಣೈ, ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ನೇಶ್ ಬರ್ಕೆ, ದ.ಕ. ದೇಹದಾರ್ಡ್ಯ ಸ್ಪರ್ಧಾ ಸಮಿತಿ ಅಧ್ಯಕ್ಷ ರಾಷ್ಟೀಯ ಕ್ರೀಡಾಪಟು ಪುಂಡಲೀಕ ಹೊಸಬೆಟ್ಟು, ಜಯಪ್ರಕಾಶ್ ಇಡ್ಯಾ, ಉದ್ಯಮಿ ಸತೀಶ್ ಮುಂಚೂರು, ಮುರಳಿ ಹೆಚ್., ಮಾರುತಿ ಸೇವಾ ಸಂಘ ಉಳ್ಳಾಲ ಇದರ ಅಧ್ಯಕ್ಷ ವರದರಾಜ್ ಉಳ್ಳಾಲ, ಎಂ.ಜಿ. ರಾಮಚಂದ್ರ ರಾವ್ ಮುಕ್ಕ, ಸಂಸ್ಥೆಯ ಗೌರವಾಧ್ಯಕ್ಷ ಪ್ರೇಮನಾಥ್ ಉಳ್ಳಾಲ, ಭಾಸ್ಕರ್ ತೊಕ್ಕೊಟ್ಟು ಮತ್ತಿತರರು ಉಪಸ್ಥಿತರಿದ್ದರು.
ದ.ಕ. ದೇಹದಾರ್ಡ್ಯ ಸ್ಪರ್ಧಾ ಸಮಿತಿ ಅಧ್ಯಕ್ಷ ಪುಂಡಲೀಕ ಹೊಸಬೆಟ್ಟು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.