ಜ. 21: ಉಚಿತ ಗ್ಲುಕೋಮ ತಪಾಸಣಾ ಶಿಬಿರ

ಮಂಗಳೂರು: ಉಚಿತ ಗ್ಲುಕೋಮ ಕಣ್ಣಿನ ತಪಾಸಣಾ ಶಿಬಿರ ಕಣ್ಣಿನ ಕಾಯಿಲೆ "ಗ್ಲಾಕೋಮಾ" ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರಸಾದ್ ನೇತ್ರಾಲಯ ಮಂಗಳೂರು ಆಸ್ಪತ್ರೆಯಲ್ಲಿ ಜ.21 ರಂದು ನಡೆಯಲಿದೆ.
ಗ್ಲುಕೋಮ ಕಣ್ಣಿನ ರೋಗದಿಂದ ದೃಷ್ಟಿನರಗಳು ಹಾನಿಗೊಳ್ಳುತ್ತವೆ. ಗ್ಲುಕೋಮವು ಆರಂಭಿಕ ಹಂತದಲ್ಲಿ ಕೆಲವು ಲಕ್ಷಣ ಗಳನ್ನು ತೋರಿಸಬಹುದು ಅಥವಾ ತೋರಿಸದೆ ಇರಬಹುದು ಕೆಲವೊಮ್ಮೆ ಯಾವ ಮುನ್ಸೂಚನೆಯನ್ನು ಕೂಡ ನೀಡದೆ ಅಂಧತ್ವಕ್ಕೆ ಕಾರಣವಾಗಬಹುದು.
ಒಳ ಒತ್ತಡ (ಎಲಿವೇಟೆಡೆ ಇಂಟ್ರಾಕ್ಯುಲರ್ ಪ್ರೆಶರ್) ಗ್ಲಾಕೋಮ ಉಂಟಾಗಲು ಪ್ರಮುಖ ಕಾರಣ ಕುಟುಂಬದಲ್ಲಿ ಗ್ಲಾಕೋಮ ಹೊಂದಿದವರು ಇದ್ದರೆ ಅಂತವರಿಗೆ ಗ್ಲುಕೋಮಾ ಪಾರಂಪರಿಕವಾಗಿ ಬರಬಹುದು, 40 ಕ್ಕೂ ಹೆಚ್ಚಿನ ವಯಸ್ಸಿ ನವರಿಗೆ ಇದರ ಅಪಾಯ ಹೆಚ್ಚು ಡಯಾಬಿಟೀಸ್ ಇರುವವರು ಕೂಡಾ ಗ್ಲುಕೋಮ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಅಧಿಕ. ದೀರ್ಘಕಾಲ ಸ್ಟಿರಾಯ್ಡ್ ಬಳಸಿದವರು ಹಾಗೂ ಕಣ್ಣಿಗೆ ಗಾಯವಾಗಿದ್ದವರಿಗೆ ಗ್ಲುಕೋಮ ತಗಲುವ ಸಾಧ್ಯತೆ ಇರುತ್ತದೆ.
ಮಂಗಳೂರು ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯದಲ್ಲಿ ಜ.21 ರಂದು ಉಚಿತ ಗ್ಲುಕೋಮಾ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 9.00ಕ್ಕೆ ಪ್ರಾರಂಭವಾಗುವ ಶಿಬಿರವು ಮಧ್ಯಾಹ್ನ 1ರವರೆಗೆ ನಡೆಯಲಿದ್ದು, ಶಿಬಿರದಲ್ಲಿ ಉಚಿತ ತಪಾಸಣೆ ಇರುತ್ತದೆ. ಹೆಚ್ಚಿನ ತಪಾಸಣೆ ಅಗತ್ಯ ಕಂಡುಬರುವ ಶಿಬಿರಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ತಪಾಸಣೆ ನಡೆಸಲಾಗುವುದು ಮತ್ತು ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನಡೆಸಲಾಗುವುದು. ಸಾರ್ವಜನಿಕರು ಅಪಾಯಿಂಟ್ಮೆಂಟ್ ಗಾಗಿ 0824 4276565, 9513586565 ನಂಬರನ್ನು ಸಂಪರ್ಕಿಸಬೇಕು ಎಂದು (ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಹಾಕಾಳಿ ದೇವಸ್ಥಾನ ಹತ್ತಿರ, ಪಂಪೈಲ್, ಉಜ್ಯೋಡಿ, ಎನ್. ಎಚ್ -66, ಮಂಗಳೂರು -575002) ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.







