ಜ. 4ರಂದು ವಚನ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ಕಾಯಕ ರತ್ನ ಪ್ರಶಸ್ತಿ ಪುರಸ್ಕಾರ

ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರಗಲಿರುವ ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನದಲ್ಲಿ ಜ. 4ರಂದು ಅನೇಕ ಸಾಧಕರಿಗೆ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಕಾಯಕ ರತ್ನ ಪ್ರಶಸ್ತಿಗೆ ಡಾ.ಹರಿಕೃಷ್ಣ ಪುನರೂರು(ಸಮಾಜ ಸೇವೆ), ಡಾ.ಮೋಹನ ಆಳ್ವ (ಶಿಕ್ಷಣ/ಸಾಂಸ್ಕೃತಿಕ), ಮಣಿಕಾಂತ ಕದ್ರಿ (ಸಂಗೀತ), ಡಾ.ಶಾಲಿನಿ ನಾಲ್ವಾಡ್(ವೈದ್ಯಕೀಯ),ಡಾ.ಗುರುಕಿರಣ್ (ಸಂಗೀತ),ಮಲ್ಲಮ್ಮ ಯಾಳವಾರ (ಸಹಕಾರಿ ಬ್ಯಾಂಕ್),ರಾಜೇಶ್ವರಿ ಜಮಖಂಡಿ (ಸಮಾಜ ಸೇವೆ), ಕೆ.ಯುವರಾಜ್ ಶಿವಮೊಗ್ಗ (ಜನಪದ ಗಾಯಕ,ಸಂಗೀತ ನಿರ್ದೇಶಕ),ಡಾ.ದೇವದಾಸ್ ಕಾಪಿಕಾಡ್(ತುಳು ಸಿನಿಮಾ, ನಾಟಕರಂಗ),ಜನಾರ್ದನ ಬಿಜೋಡಿ (ದೈವ ನರ್ತನ), ಮೊಹಮ್ಮದ್ ಯಾಸಿರ್(ಪುರಾತನ ವಸ್ತುಸಂಗ್ರಹ), ವಾಲ್ಟರ್ ನಂದಳಿಕೆ(ಪತ್ರಿಕೋದ್ಯಮ), ಜನಸ್ನೇಹಿ ಚಾರಿಟೇಬಲ್ ಟ್ರಸ್ಟ್,ಬೆಂಗಳೂರು ಮತ್ತು ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಸಂಘಟನೆಗಳನ್ನೂ ಗೌರವಿಸಲಾಗುವುದು.
ಪ.ಪೂ. ಸುತ್ತೂರು ಜಗದ್ಗುರು ಡಾ.ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳು, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮತ್ತು ಪ.ಪೂ ಶ್ರೀ ರುದ್ರಮುನಿ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವು ದೆಂದು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಹಾಗೂ ಅಕ್ಕ ಮಹಾದೇವಿ ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಸುಮಾ ಎ.ಮಾನ್ವಿ ತಿಳಿಸಿದ್ದಾರೆ.





