ಕುಪ್ಪೆಟ್ಟಿ| ಮದ್ರಸ ಪರೀಕ್ಷೆಯಲ್ಲಿ 600ರಲ್ಲಿ 600 ಅಂಕ ಪಡೆದ ಸಈದಾಳಿಗೆ ಜಮಾಅತ್ ನಿಂದ ಚಿನ್ನದ ಉಂಗುರ
ಮಂಗಳೂರು, ಮೇ 6: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಇದರ ಅಧೀನದಲ್ಲಿ ನಡೆದ 7ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಎಲ್ಲಾ ವಿಷಯದಲ್ಲೂ 100 ಅಂಕಗಳೊಂದಿಗೆ, 600 ರಲ್ಲಿ 600 ಪಡೆದ ಕುಪ್ಪೆಟ್ಟಿ ರೇಂಜ್ ವ್ಯಾಪ್ತಿಯ ನೆಕ್ಕಿಲು ಅಬೂಬಕರ್ ಸಿದ್ದೀಕ್ ಜುಮಾ ಮಸ್ಜಿದ್ ಅಧೀನದಲ್ಲಿರುವ, ನೂರುಲ್ ಹುದಾ ಸೆಕೆಂಡರಿ ಮದ್ರಸದ ವಿದ್ಯಾರ್ಥಿನಿ ಫಾತಿಮತ್ ಸಈದಾಳಿಗೆ ಮದ್ರಸ ಆಡಳಿತ ಸಮಿತಿ ನೇತೃತ್ವದಲ್ಲಿ ಜಮಾಅತ್ ವತಿಯಿಂದ ಫತ್ಹೇ ಮುಬಾರಕ್ ಸಮಾರಂಭದಲ್ಲಿ ಚಿನ್ನದ ಉಂಗುರ ನೀಡಿ ಅಭಿನಂದಿಸಲಾಯಿತು.
ಜಮಾಅತ್ ಅಧ್ಯಕ್ಷ ಕೆ.ಪಿ. ರಮ್ಲಾನ್ ಹಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಉಸ್ತಾದರಾದ ಉಮರುಲ್ ಫಾರೂಕ್ ಸಖಾಫಿ ವೇಣೂರು ಸಮಾರಂಭವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಅಧ್ಯಾಪಕರಾದ ಮುಹಮ್ಮದ್ ಹನೀಫ್ ಮಿಸ್ಬಾಹಿ ಅಮ್ಚಿನಡ್ಕ, ಸಂಶುದ್ದೀನ್ ಹಿಮಮಿ ಉರುವಾಲು ಪದವು, ಕಾರ್ಯದರ್ಶಿ ಶರೀಫ್ ಜಾರಿಗೆದಡಿ, ಕೋಶಾಧಿಕಾರಿ ಹಮೀದ್, ಉಪಾಧ್ಯಕ್ಷರಾದ ಅಸ್ಕರ್, ಕಾರ್ಯದರ್ಶಿಗಳಾದ ಬಶೀರ್ ಮುಸ್ಲಿಯಾರ್, ಅಬ್ಬಾಸ್ ಮುಂಡ್ರೋಟು, ಸದಸ್ಯರಾದ ಕಾಸಿಂ ಬಳ್ಳಿ, ಅಬ್ದುಲ್ ಬಶೀರ್, ಅಶ್ರಫ್, ಲತೀಫ್, ಅಬ್ದುಲ್ ರಝಾಕ್ ಫೈಝಿ, ಅಬ್ದುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.
ಸದರ್ ಉಸ್ತಾದ್ ಮುಹಮ್ಮದ್ ಮುಸ್ತಫಾ ಹಿಮಮಿ ಪರಪ್ಪು ಸ್ವಾಗತಿಸಿದರು.