ಜೂ.13ರಂದು ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ
![ಜೂ.13ರಂದು ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ ಜೂ.13ರಂದು ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ](https://www.varthabharati.in/h-upload/2024/06/11/1271517-electricity1652489245.webp)
ಮಂಗಳೂರು,ಜೂ. 11: ಕುಲಶೇಖರ ಉಪಕೇಂದ್ರದಿಂದ ಹೊರಡುವ ವಾಮಂಜೂರು ಫೀಡರ್ ಹಾಗೂ ಕದ್ರಿ ಉಪ ಕೇಂದ್ರದಿಂದ ಹೊರಡುವ ಕದ್ರಿ ಟೋಲ್ಗೇಟ್ಫೀಡರ್ ವಿದ್ಯುತ್ ಮಾರ್ಗ ವ್ಯಾಪ್ತಿಯ ಪ್ರದೇಶಗಳಲ್ಲಿ ಜೂ. 13ರ ಗುರುವಾರ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ.
ಕುಲಶೇಖರ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ವಾಮಂಜೂರು ಫೀಡರ್ನಲ್ಲಿ ಜೂ. 13 ರಂದು ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್. ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ
ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಪಚ್ಚನಾಡಿ, ದೇವಿನಗರ, ವಾಮಂಜೂರು, ಮಂಗಳನಗರ, ಅಮೃತನಗರ, ಕೆತ್ತಿಕಲ್ಲು, ಆರ್.ಟಿ.ಒ ಟೆಸ್ಟ್ ಯಾರ್ಡ್, ಸಂತೋಷನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
ಕದ್ರಿ: 33/11 ಕೆ.ವಿ. ಕದ್ರಿ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಕದ್ರಿ ಟೋಲ್ಗೇಟ್ ಫೀಡರ್ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಒ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಅದುದರಿಂದ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯ ವರೆಗೆ ಅಭಿನಂದನ್, ಟೋಲ್ಗೇಟ್ , ತಾರೆತೋಟ, ನಂತೂರು ಬಸ್ಸ್ಟಾಂಡ್, ಕರಾವಳಿ ಲೇನ್, ಕದ್ರಿ ಪಾರ್ಕ್, ಜೋಗಿಮಠ, ಕೊಚ್ಚಿನ್ ಬೇಕರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.