ಜೂ.2: ಶರಫುಲ್ ಉಲಮಾ 5ನೇ ಆಂಡ್ ನೇರ್ಚೆ
ಮಂಜನಾಡಿ, ಮೇ 15: ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ನ ಸ್ಥಾಪಕ, ಖ್ಯಾತ ವಿದ್ವಾಂಸ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಉಸ್ತಾದ್ ಅವರ 5ನೇ ವಾರ್ಷಿಕ ಅನುಸ್ಮರಣಾ ಸಂಗಮ ಹಾಗೂ ಬುರ್ದಾ ಮಜ್ಲಿಸ್ ಜೂ.2ರಂದು ಅಲ್ ಮದೀನದಲ್ಲಿ ಜರುಗಲಿದೆ.
ಅಂದು ಅಸರ್ ನಮಾಜಿನ ನಂತರ ಸಯ್ಯಿದ್ ಫಝಲ್ ಕೋಯಮ್ಮ ತಂಳ್ ಕೂರ ನೇತೃತ್ವದಲ್ಲಿ ಖತಮುಲ್ ಖುರ್ಆನ್ ಮಜ್ಲಿಸ್ ಜರುಗಲಿದೆ. ಮಗ್ರಿಬ್ ನಮಾಝಿನ ನಂತರ ಅನುಸ್ಮರಣಾ ಸಂಗಮ ನಡೆಯಲಿದೆ. ಜಬ್ಬಾರ್ ಸಖಾಫಿ ಪಾತೂರು ಅನುಸ್ಮಾರಣಾ ಪ್ರಭಾಷಣ ನಡೆಸಲಿದ್ದಾರೆ. ಬುರ್ದಾ ಆಲಾಪನೆಗಾರರಾದ ಹಾಫಿಲ್ ಸಾದಿಖಲಿ ಫಾಳಿಲಿ ಗೂಡಲ್ಲೂರು, ಸಯ್ಯಿದ್ ತ್ವಾಹಾ ತಂಳ್ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದೆ. ಖ್ಯಾತ ಮದ್ಹ್ಗಾಯಕರಾದ ಹಾಫಿಝ್ ಅನ್ವರ್ ಸಖಾಫಿ ಶಿರಿಯ, ಶುಕೂರ್ ಇರ್ಫಾನಿ, ಶಹೀನ್ ಬಾಬು ತಾನೂರು,ನಾಸಿಫ್ ಕೋಝಿಕೋಡ್ ಭಾಗವಹಿಸಲಿದ್ದಾರೆ.
*ಕಾರ್ಯಕ್ರಮದ ಸಂಘಟನೆಗಾಗಿ ಸ್ವಾಗತ ಸಮಿತಿ ರಚನಾ ಸಭೆಯು ಅಲ್ಮದೀನ ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿಯ ಅಧ್ಯಕ್ಷತೆಯಲ್ಲಿ ನಡೆಯಿತು. ದಅವಾ ಕಾಲೇಜಿನ ಪ್ರಾಂಶುಪಾಲ ಸಯ್ಯಿದ್ ಉವೈಸ್ ತಂಳ್ ದುಆ ನೆರವೇರಿಸಿದರು. ಮುನೀರ್ ಅಹ್ಮದ್ ಸಖಾಫಿ ಸ್ವಾಗತಿಸಿದರು. ಹಾಜಿ ಎನ್.ಎಸ್. ಕರೀಂ ಉದ್ಘಾಟಿಸಿದರು.
ಸಲಹಾ ಸಮಿತಿಗೆ ಅಬ್ದುಲ್ ಖಾದರ್ ಸಖಾಫಿ, ಸಯ್ಯಿದ್ ಉವೈಸ್ ತಂಙಳ್, ಮಜೀದ್ ಹಾಜಿ, ಎಸ್.ಕೆ. ಖಾದರ್ ಹಾಜಿ ಅವರನ್ನು ಆರಿಸಲಾಯಿತು. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಅಹ್ಮದ್ ಬಾವ ಏಶಿಯನ್ ದೇರಳಕಟ್ಟೆ, ಸಂಚಾಲಕರಾಗಿ ಹಾಜಿ ಎನ್.ಎಸ್. ಕರೀಂ ಮಂಜನಾಡಿ, ಉಪಾಧ್ಯಕ್ಷರಾಗಿ ಹಾಜಿ ಫಾರೂಕ್ ಅಬ್ಬಾಸ್ ಉಳ್ಳಾಲ, ಸಹ ಸಂಚಾಲಕರಾಗಿ ಅಬ್ಬಾಸ್ ಸಖಾಫಿ ಕೊಡಂಚಿಲ್, ಖಜಾಂಚಿಯಾಗಿ ಬಾವು ಹಾಜಿ ನೆಕ್ಕರೆ ಅವರನ್ನು ಆರಿಸಲಾಯಿತು.
ಆಹಾರ ಸಮಿತಿಯ ಸಂಚಾಲಕರಾಗಿ ಪುತ್ತಿಚ್ಚ, ಸಹ ಸಂಚಾಲಕರಾಗಿ ಕುಂಞಿಬಾವ ಕಟ್ಟೆಮಾರ್, ಅಶ್ರಫ್ ನೆಕ್ಕರೆ, ಶಂಸು ಮೋರ್ಲ, ರಫೀಕ್ ಮೋರ್ಲ, ಹನೀಫ್ ಫಾರೆಸ್ಟ್ ಅವರನ್ನು ಆರಿಸಲಾಯಿತು.
ಹಣಕಾಸು ಸಮಿತಿಯ ಅಧ್ಯಕ್ಷರಾಗಿ ಕೆ.ಎಂ.ಕೆ ಮಂಜನಾಡಿ, ಸಂಚಾಲಕರಾಗಿ ಕುಂಞಿ ಬಾವ ಹಾಜಿ ಕಲ್ಕಟ್ಟ, ಸಹ ಸಂಚಾಲಕರಾಗಿ ಮುಹಮ್ಮದ್ ಮಾಸ್ಟರ್ ಕಲ್ಕಟ್ಟ, ಅಬೂಬಕರ್ ಸಅದಿ ಮಂಜನಾಡಿ, ಶೌಕತ್ ಹಾಜಿ ದೇರಳಕಟ್ಟೆ, ಮೋನು ಕಲ್ಕಟ್ಟ, ಶರೀಫ್ ಮುಡಿಪು, ಬಶೀರ್ ಬಂಡಸಾಲೆ, ನವಾಝ್ ಮಂಜನಾಡಿ, ಉಸ್ಮಾನ್ ಮಂಜನಾಡಿ (ದಮಾಂ), ಎಂ.ಎಚ್. ಇಬ್ರಾಹೀಂ, ಹಸೈನಾರ್ ಮದನಿ, ಹೈದರಲಿ ನಈಮಿ, ಇಬ್ರಾಹೀಂ ಮೋರ್ಲ ಅವರನ್ನು ಆಯ್ಕೆ ಮಾಡಲಾಯಿತು.
ಗೆಸ್ಟ್ ರಿಸೆಪ್ಶನ್ ಕಮಿಟಿಗೆ ಮುಹಮ್ಮದ್ ಕುಂಞಿ ಅಮ್ಜದಿ, ಸಲಾಮ್ ಅಹ್ಸನಿ, ಮುನೀರ್ ಸಖಾಫಿ, ಅಮ್ಮಿ ಹಾಜಿ ದೇರಳಕಟ್ಟೆ, ಅಬ್ದುಲ್ಲ ಅಹ್ಸನಿ ಅವರನ್ನು ಸ್ವಯಂ ಸೇವಾ ವಿಭಾಗಕ್ಕೆ ಬಶೀರ್ ಮೋರ್ಲ, ಪುತ್ತುಬಾವ ಮೋರ್ಲ, ಆಸಿಫ್ ಅನ್ಸಾರ್ ನಗರ, ಅಬ್ದುಲ್ ರಹ್ಮಾನ್ ಮೋರ್ಲ ಅವರನ್ನು, ಪ್ರಚಾರ ಸಮಿತಿಗೆ ಅಬೂಬಕರ್ ಮದನಿ ಪಡಿಕ್ಕಲ್, ಅಬ್ದುರ್ರಹ್ಮಾನ್ ಮದನಿ ಸನಯ್ಯ, ಮನ್ಸೂರ್ ಹಿಮಮಿ, ಅಬ್ದುರ್ರಹ್ಮಾನ್ ಅಮಾನಿ ಮರ್ಝೂಕಿ, ಖಾದರ್ ಪಾವೂರು, ಇಮ್ತಿಯಾಝ್ ಸಜಿಪ ಅವರನ್ನು, ವೇದಿಕೆ, ಸೌಂಡ್ಸ್ ಆ್ಯಂಡ್ ಲೈಟ್ಸ್ ಸಮಿತಿಗೆ ಅಬೂಸಾಲಿಹ್ ಅಝ್ಹರಿ, ಶೌಕತ್ ಹಾಜಿ ದೇರಳಕಟ್ಟೆ, ಇಕ್ಬಾಲ್ ಮರ್ಝೂಕಿ, ಉಮರುಲ್ ಫಾರೂಕ್ ಮಂಜನಾಡಿ, ಇಬ್ರಾಹೀಂ ಮದನಿ ಅವರನ್ನು ಆರಿಸಲಾಲಾಯಿತು.
*ಅಲ್ ಮದೀನ ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ಹಾಜಿ ಸಾದುಕುಂಞಿ ಮಾಸ್ಟರ್ ಅವರನ್ನು ಅನುಸ್ಮರಿಸಿ ತಹ್ಲೀಲ್ ಸಮರ್ಪಿಸಲಾಯಿತು.