ಅ.21: ‘ಅಮರ’ನಗರ ಹಸಿರೀಕರಣ ಅಭಿಯಾನಕ್ಕೆ ಚಾಲನೆ
ಮಂಗಳೂರು,ಎ .20: ಸುಸ್ಥಿರ ಭವಿಷ್ಯಕ್ಕಾಗಿ ‘ಮರ ನೆಡು , ಮರ ದತ್ತು’ ಎಂಬ ಧ್ಯೇಯ ವಾಕ್ಯದೊಂದಿಗೆ ಜಿಲ್ಲಾಡಳಿತ ,ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ನಾಗರಿಕ ಸಹಕಾರದೊಂದಿಗೆ ನಡೆಯಲಿರುವ ‘ಅಮರ’ ನಗರ ಹಸಿರೀಕರಣ ಅಭಿಯಾನಕ್ಕೆ ಮನಪಾ ಕಚೇರಿ ಬಳಿ ಎ.21ರಂದು ಬೆಳಗ್ಗೆ 10:00 ಗಂಟೆಗೆ ಚಾಲನೆ ದೊರೆಯಲಿದೆ.
ಈ ಅಭಿಯಾನದಲ್ಲಿ ನಗರದಲ್ಲಿ 30 ಸಾವಿರ ಗಿಡಗಳನ್ನು ನೆಟ್ಟು ಬೆಳಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story





