ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ : ನೂತನ ಅಧ್ಯಕ್ಷರಾಗಿ ಸಿಎ ಅನಂತೇಶ್ ವಿ. ಪ್ರಭು

ಮಂಗಳೂರು: ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮಂಗಳೂರು ಇದರ ನೂತನ ಅಧ್ಯಕ್ಷರಾಗಿ ಅರುಣಾ ಇಂಡಸ್ಟ್ರೀಸ್ನ ವ್ಯವಸ್ಥಾಪಕ ಪಾಲುದಾರ ಸಿಎ ಅನಂತೇಶ್ ವಿ. ಪ್ರಭು ಆಯ್ಕೆಯಾಗಿದ್ದಾರೆ.
ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸದಸ್ಯರ 83ನೇ ವಾರ್ಷಿಕ ಸಾಮಾನ್ಯ ಸಭೆಯು ಶನಿವಾರ (ಸೆ.28) ಸಂಸ್ಥೆಯ ನೋಂದಾಯಿತ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ 2023-24ನೇ ಸಾಲಿಗೆ ಸಂಸ್ಥೆಯ ಹೊಸ ಅಧ್ಯಕ್ಷರು, ಇತರ ಪದಾಧಿಕಾರಿಗಳು ಮತ್ತು ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.
ಅವರ ವಿವರ ಇಂತಿವೆ.
ಸಿಎ ಅನಂತೇಶ್ ವಿ. ಪ್ರಭು (ಅಧ್ಯಕ್ಷರು) , ಆನಂದ್ ಜಿ. ಪೈ(ಉಪಾಧ್ಯಕ್ಷರು), ಸಿಎ ಅಬ್ದುರ್ ರಹ್ಮಾನ್ ಮುಸ್ಬಾ(ಖಜಾಂಚಿ), ಮತ್ತು ಪಿ.ಬಿ. ಅಹ್ಮದ್ ಮುದಸ್ಸರ್ ಮತ್ತು ಅಶ್ವಿನ್ ಪೈ ಮಾರೂರ್ (ಗೌರವ ಕಾರ್ಯದರ್ಶಿಗಳು), ನಿಟ್ಟೆ ಯತಿರಾಜ್ ಶೆಟ್ಟಿ, ಅಮಿತ್ ರಾಮಚಂದ್ರ, ದಿವಾಕರ್ ಪೈ ಕೊಚ್ಚಿಕಾರ್, ಆಶಿತ್ ಬಿ. ಹೆಗ್ಡೆ, ನಿಸ್ಸಾರ್ ಫಕೀರ್ ಮೊಹಮ್ಮದ್, ಬಿ. ಎ. ನಝೀರ್, ಆತ್ಮಿಕಾ ಅಮಿನ್, ಆದಿತ್ಯ ಪದ್ಮನಾಭ ಪೈ , ವಿನ್ಸೆಂಟ್ ಕುಟಿನ್ಹಾ, ಸಿಎ ನಂದ ಗೋಪಾಲ್ ಶೆಣೈ, ಜೀತನ್ ಅಲೆನ್ ಸಿಕ್ವೆರಾ, ಸುಜಿರ್ ಪ್ರಸಾದ್ ನಾಯಕ್ (ನಿರ್ದೇಶಕರು)





