ಡಿ.19ರಿಂದ ಸಿಟಿ ಗೋಲ್ಡ್ನಲ್ಲಿ ವಜ್ರಾಭರಣ ಪ್ರದರ್ಶನ ಮತ್ತು ಮಾರಾಟ ಮೇಳ

ಮಂಗಳೂರು : ನಗರದ ಕಂಕನಾಡಿಯಲ್ಲಿರುವ ಪ್ರತಿಷ್ಠಿತ ಚಿನ್ನ ಮತ್ತು ವಜ್ರಾಭರಣ ಮಳಿಗೆ ಸಿಟಿ ಗೋಲ್ಡ್ & ಡೈಮಂಡ್ಸ್ ನಲ್ಲಿ ಡಿ.19ರಿಂದ 2026ರ ಜನವರಿ 15ರವರೆಗೆ THE HOPE ವಜ್ರಾಭರಣ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ,
ಈ ಮೇಳವನ್ನು ಡಿ.19ರ ಸಂಜೆ 4:30ಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಉದ್ಘಾಟಿಸಲಿದ್ದಾರೆ. ಮುಖ್ಯ ಆತಿಥಿಗಳಾಗಿ ಸೋಷಿಯಲ್ ಇನ್ಫ್ಲುಯೆನ್ಸರ್ಗಳಾದ ಅನೀಶ್ ಮತ್ತು ನೇಹಾ ಹಾಗೂ ಉದ್ಯಮಿಗಳಾದ ಉಮ್ಮರ್ ಫಾರೂಕ್, ರಿಯಾಝ್ ಅಶ್ರಫ್, ಆಶಿಕ್ ಕುಕ್ಕಾಜೆ ಭಾಗವಹಿಸಲಿದ್ದಾರೆ.
THE HOPE ವಜ್ರಾಭರಣ ಪ್ರದರ್ಶನ ಪ್ರಯುಕ್ತ ಗ್ರಾಹಕರಿಗೆ ವಜ್ರಾಭರಣ ಖರೀದಿಯಲ್ಲಿ 1 ಕ್ಯಾರೆಟ್ಗೆ 15,000 ರೂ. ರಿಯಾಯಿತಿ ನೀಡಲಾಗುವುದು. ಇತರೆ ಬ್ರಾಂಡ್ನ ವಜ್ರಾಭರಣವನ್ನು ಉತ್ತಮ ದರದೊಂದಿಗೆ ವಿನಿಮಯ ಮಾಡಿಕೊಡಲಾಗುವುದು. ಯಾವುದೇ ಬ್ರಾಂಡಿನ ವಜ್ರಾಭರಣಗಳನ್ನು ಉಚಿತ ಸರ್ವಿಸ್ ಮಾಡಿ ಕೊಡಲಾಗುವುದು. ಅಲ್ಲದೆ ದೇಶ ವಿದೇಶಗಳ ವಜ್ರಾಭರಣ ಪ್ರದರ್ಶನ ಕೂಡಾ ನಡೆಯಲಿದೆ ಎಂದು ಸಿಟಿ ಗೋಲ್ಡ್ನ ಪ್ರಕಟನೆ ತಿಳಿಸಿದೆ.
Next Story







