ಬೈಕ್ಗಳ ನಡುವೆ ಢಿಕ್ಕಿ : ಸವಾರ ಮೃತ್ಯು

ಸಾಂದರ್ಭಿಕ ಚಿತ್ರ
ಮಂಗಳೂರು : ಕಿನ್ನಿಗೋಳಿ-ಮೂಡಬಿದ್ರೆ ರಸ್ತೆಯ ನೇಕಾರ ಕಾಲೋನಿ ಕ್ರಾಸ್ ಬಳಿ ಬೈಕ್ಗೆ ಇನ್ನೊಂದು ಬೈಕ್ ಹಿಂದಿನಿಂದ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಪ್ರಸಾದ್ ಎಂಬವರು ಮೃತಪಟ್ಟ ಘಟನೆ ವರದಿಯಾಗಿದೆ.
ನ.1ರಂದು ದೂರುದಾರ ಮಂಜುನಾಥ ಭಟ್ ಎಂಬವರ ಬೈಕ್ಗೆ ಪ್ರಸಾದ್ ಎಂಬವರ ಇನ್ನೊಂದು ಬೈಕ್ ಹಿಂದಿನಿಂದ ಢಿಕ್ಕಿ ಹೊಡೆದಿತ್ತು. ಇದರ ಪರಿಣಾಮವಾಗಿ ಎರಡೂ ಬೈಕ್ಗಳ ಸವಾರರಾದ ಮಂಜುನಾಥ್ ಭಟ್ ಮತ್ತು ಪ್ರಸಾದ್ ಎಂಬವರು ರಸ್ತೆಗೆ ಎಸೆಯಲಟ್ಟಿದ್ದರು. ಮಂಜುನಾಥ ಭಟ್ ಅವರ ಕಾಲಿಗೆ ಗಾಯವಾಗಿತ್ತು. ಪ್ರಸಾದ್ ಅವರ ಕೈಗೆ ಮತ್ತು ತಲೆಗೆ ಗಾಯವಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಪ್ರಸಾದ್ ಅವರು ನ.2ರಂದು ಮೃತಪಟ್ಟಿದ್ದಾರೆ.
ಈ ಕುರಿತು ಟ್ರಾಫಿಕ್ ಉತ್ತರ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





