ಮದನಿಯ್ಯ ಸಾದಾತ್ ಫೌಂಡೇಶನ್ನಿಂದ ಸಹಾಯಧನ ವಿತರಣೆ

ಮಂಗಳೂರು: ಮದನಿಯ್ಯ ಸಾದಾತ್ ಫೌಂಡೇಶನ್ (ಎಂಎಸ್ಎಫ್), ಕರ್ನಾಟಕ ಇದರ ವತಿಯಿಂದ ಬಡ ಸಾದಾತ್ ಕುಟುಂಬಗಳ ಚಿಕಿತ್ಸಾ ವೆಚ್ಚಕ್ಕಾಗಿ 44,000 ರೂ. ಚೆಕ್ ಅನ್ನು ಸೈಯದ್ ಜಲಾಲುದ್ದೀನ್ ತಂಙಳ್ ಉಜಿರೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮದನಿಯ್ಯ ಸಾದಾತ್ ಫೌಂಡೇಶನ್ನ ಅಧ್ಯಕ್ಷರಾದ ಸೈಯದ್ ಜವಾದ್ ತಂಙಳ್ ಅಲ್ ಹಾಶಿಮಿ ಉಳ್ಳಾಲ, ಕಾರ್ಯದರ್ಶಿ ಹಂಝ ಉಳ್ಳಾಲ, ಕೋಶಾಧಿಕಾರಿ ರಮೀಝ್ ಮೇಲಂಗಡಿ, ಅಬ್ದುಲ್ ರಝ್ಝಾಕ್ ಸಖಾಫಿ ಮಡಂತ್ಯಾರ್, ನಿಝಾಮ್ ಶಾ ಕೋಟೆಪುರ ಉಪಸ್ಥಿತರಿದ್ದರು.
Next Story





