ಪಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತರ್ ರಾಷ್ಟ್ರೀಯ ಕಾರ್ಯಾಗಾರ

ಮಂಗಳೂರು: ಆಂತರಿಕ ಗುಣಮಟ್ಟದ ಭರವಸೆ ಕೋಶ, PACE, ಮಂಗಳೂರು ಇವರ ಸಹಯೋಗದೊಂದಿಗೆ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಗಾಗಿ ಸೆಂಟರ್ಆಫ್ಎಕ್ಸಲೆನ್ಸ್, ಸಂಶೋಧನೆ, ಬರವಣಿಗೆ ಮತ್ತು ಪ್ರಕಟಣೆಯ ಬಗ್ಗೆ ಮೂರು ದಿನಗಳ ಕಾರ್ಯಾಗಾರ ಪಿಎ ಇಂಜಿನಿಯರಿಂಗ್ ಕಾಲೇಜಿನ ವಿವಿಧೋದ್ದೇಶ ಸಭಾಂಗಣದಲ್ಲಿ ಗುರುವಾರ ಉದ್ಘಾಟನೆಗೊಂಡಿತು.
ಮುಖ್ಯಅತಿಥಿ, ಸೌದಿ ಅರೇಬಿಯಾದ ಇಮಾಮ್ ಅಬ್ದುಲ್ರಹಮಾನ್ ಬಿನ್ ಫೈಸಲ್ ವಿಶ್ವವಿದ್ಯಾನಿಲಯದ ಆರ್ಕಿಟೆಕ್ಚರ್ ಮತ್ತು ಪ್ಲಾನಿಂಗ್ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಎಂ.ಅಬ್ದುಲ್ ಮುಜೀಬು ಕಾರ್ಯಾಗಾರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪರಿಣಾಮಕಾರಿ ಸಂಶೋಧನಾ ಬರವಣಿಗೆಯ ಮಹತ್ವ ಹಾಗೂ ಜ್ಞಾನ ಮತ್ತು ಶೈಕ್ಷಣಿಕ ಉತ್ಕಷ್ಟತೆಗೆ ಕೊಡುಗೆ ನೀಡುವಲ್ಲಿ ಅದರ ಮಹತ್ವವನ್ನು ಒತ್ತಿ ಹೇಳಿದರು. ಸಂಶೋಧಕರು ತಮ್ಮ ಸಂಶೋ ಧನೆಯ ಕ್ಷೇತ್ರದಲ್ಲಿ ವಿಶ್ವಾಸಾರ್ಹತೆ ಮತ್ತು ಪ್ರಭಾವವನ್ನು ಖಚಿತಪಡಿಸಿಕೊಳ್ಳಲು ಉನ್ನತ-ಗುಣಮಟ್ಟದ ಸಂಶೋಧನಾ ಅಭ್ಯಾಸಗಳು ಮತ್ತು ನೈತಿಕ ಬರವಣಿಗೆಯ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕಾಗಿರುವುದು ಅಗತ್ಯ ಎಂದರು.
ಗೌರವ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿಯ ಅಂತರ್ರಾಷ್ಟ್ರೀಯ ಪೋಸ್ಟ್ ಡಾಕ್ ಫೆಲೋ ಡಾ.ಅಜೀಝುದ್ದೀನ್ ಸುಲ್ತಾನಿ ತಮ್ಮ ಸಂಶೋಧನಾ ಕಾರ್ಯದಲ್ಲಿ ಯಶಸ್ಸು ಸಾಧಿಸಲು ಉತ್ತಮ ಸಂಶೋಧ ಕರು ಬೆಳೆಸಿಕೊಳ್ಳಬೇಕಾದ ಗುಣಗಳು ಮತ್ತು ಉತ್ತಮ ಅಭ್ಯಾಸಗಳನ್ನು ವಿವರಿಸಿದರು.
ಶರ್ಫುದ್ದೀನ್ ಪಿ.ಕೆ. ಎಜಿಎಂ (ಕ್ಯಾಂಪಸ್) ಗೌರವ ಅತಿಥಿಯಾಗಿದ್ದರು.
ಈ ಕಾರ್ಯಾಗಾರವು ಸಂಶೋಧನಾ ವಿದ್ವಾಂಸರು ಮತ್ತು ಶಿಕ್ಷಣ ತಜ್ಞರನ್ನು ಸಂಶೋಧನಾ ಬರವಣಿಗೆ, ಪ್ರಕಟನೆ ಮತ್ತು ಪ್ರಸರಣಕ್ಕೆ ಸಂಬಂಧಿಸಿದ ಅಗತ್ಯಕೌಶಲ್ಯ ಮತ್ತುಜ್ಞಾನದೊಂದಿಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ.
ಪ್ರಾಂಶುಪಾಲರಾದ ಡಾ.ರಮೀಸ್ ಎಂ.ಕೆ. ಅಧ್ಯಕ್ಷೀಯ ನುಡಿಗಳನ್ನಾಡಿದರು. ಸಿಎಸ್ಇ ವಿಭಾಗದ ಪ್ರಾಧ್ಯಾಪಕ ಪ್ರೊ.ಫಾತಿಮತ್ ರೈಹಾನ್ ಸ್ವಾಗತಿಸಿದರು.ಯುರೇಕಾದ ಸಂಚಾಲಕ ಡಾ.ಪ್ರಶಾಂತ್ ಪೈ ಎಂ, ಇವರುಡಾ.ಮುಜೀಬು ಅವರನ್ನು ಸಭೆಗೆ ಪರಿಚಯಿಸಿದರು.
ಸಿವಿಲ್ ಇಂಜಿನಿಯರ್ಅಧ್ಯಾಪಕ ಪ್ರಾಧ್ಯಾಪಕಿ ಕಾವ್ಯಶ್ರೀ ವಂದಿಸಿದರು. ಸಿಎಮ್ಎಸ್ಆರ್ನ ಪ್ರಾಧ್ಯಾಪಕರಾದ ಶಮಾ ಎ, ಕಾರ್ಯಕ್ರಮ ನಿರೂಪಿಸಿದರು.







