ಕುದ್ರೋಳಿ ಮಖಾಂ ಉರೂಸ್ ಸಮಾರೋಪ

ಮಂಗಳೂರು: ನಗರದ ಕುದ್ರೋಳಿ ಕರ್ಬಲಾ ಕಾಂಪೌಂಡಿನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ)ರವರ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ಆಚರಿಸುತ್ತಿರುವ ಉರೂಸ್ ಸಮಾರೋಪವು ಶನಿವಾರ ನಡೆಯಿತು.
ಅಸ್ಸಯ್ಯಿದ್ ಸೈಫುದ್ದೀನ್ ಜಮಾಲುಲೈಲಿ ತಂಳ್ ಫೈಝಿ ಮನ್ನಾರ್ಕಾಡ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕಂಡತ್ಪಳ್ಳಿ ಜುಮಾ ಮಸೀದಿಯ ಖತೀಬ್ ಪಿ.ಎ. ಮುಹಮ್ಮದ್ ರಫೀಕ್ ಮದನಿ ಅಲ್ಕಾಮಿಲ್ ಸಭೆಯನ್ನು ಉದ್ಘಾಟಿಸಿದರು.
ಕುದ್ರೋಳಿ ಎಂಜೆಂ ಮಸೀದಿಯ ಖತೀಬ್ ಮುಹಮ್ಮದ್ ಬಾಖವಿ, ನಡುಪಳ್ಳಿ ಜುಮಾ ಮಸೀದಿಯ ಖತೀಬ್ ಕೆ.ಎಸ್. ರಿಯಾಝ್ ಪೈಝಿ ಕಕ್ಕಿಂಜೆ ಮಾತನಾಡಿದರು. ದರ್ಗಾದ ಅಧ್ಯಕ್ಷ ಮುಸ್ತಾಕ್ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಅಲಿ ಫೈಝಿ, ಸಿರಾಜ್ ಫೈಝಿ, ತ್ವಹಿಬ್ ಫೈಝಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ, ಕಾರ್ಪೊರೇಟರ್ ಸಂಶುದ್ಧೀನ್ ಎಚ್ಬಿಟಿ, ನಡುಪಳ್ಳಿ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಹಾಜಿ ಬಿ. ಅಬೂಬಕ್ಕರ್, ಹಾಲಿ ಅಧ್ಯಕ್ಷ ಫಝಲ್ ಮುಹಮ್ಮದ್, ಮಾಜಿ ಕಾರ್ಪೋರೇಟರ್ ಎಂ. ಅಬ್ದುಲ್ ಅಝೀಝ್, ಎಸ್ಕೆಎಸೆಸ್ಸೆಫ್ ಕುದ್ರೋಳಿ ಯುನಿಟ್ ಅಧ್ಯಕ್ಷ ಎನ್.ಕೆ. ಅಬೂಬಕ್ಕರ್, ನಿಕಟಪೂರ್ವ ಅಧ್ಯಕ್ಷ ಬಿ.ಎ. ಇಸ್ಮಾಯಿಲ್, ಕೆಪಿಸಿಸಿ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ವಹ್ಹಾಬ್ ಕುದ್ರೋಳಿ, ದರ್ಗಾದ ಉಪಾಧ್ಯಕ್ಷ ಹಾಜಿ ಅಲ್ತಾಫ್, ಇಮ್ರಾನ್ ಬಂದರ್, ಅಸ್ಲಂ, ಅನ್ವರ್, ಕೆ.ಎಚ್.ಬಿ. ಅಬ್ದುಲ್ಲ, ಹಾಜಿ ಕೆ. ಕಬೀರ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಕಾರ್ಯಕ್ರಮ ನಿರೂಪಿದರು.