ಕೊಲ್ಲರಕೋಡಿಯಲ್ಲಿ ‘ಲುಮಿನಸ್ ಮದೀನಾ’ ಮೀಲಾದ್ ಫೆಸ್ಟ್

ನರಿಂಗಾನ : ನೂರುಲ್ ಹುದಾ ಮಸ್ಜಿದ್ ತಖ್ವಾ, ನೂರುಲ್ ಉಲೂಮ್ ಮದರಸ, ಕೆಎಂಜೆ, ಎಸ್ ವೈ ಎಸ್, ಎಸ್ಸೆಸ್ಸೆಫ್ ಕೊಲ್ಲರಕೋಡಿ ಶಾಖೆ ಇದರ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್(ಸ.) ಪೈಗಂಬರ್ ರವರ ಜನ್ಮ ದಿನಾಚರಣೆ ಪ್ರಯುಕ್ತ ಮೀಲಾದ್ ಫೆಸ್ಟ್ ಕಾರ್ಯಕ್ರಮ ಮಸೀದಿ ವಠಾರದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಮೌಲೀದ್ ಪಾರಾಯಣ, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, ಬಹುಮಾನ ವಿತರಣೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂರುಲ್ ಹುದಾ ಮಸ್ಜಿದ್ ತಖ್ವಾ ಅಧ್ಯಕ್ಷ ಎನ್ ಐ ಮಹಮ್ಮದ್ ವಹಿಸಿದ್ದರು. ಕೊಲ್ಲರಕೋಡಿ ಮದರಸ ಸದರ್ ಇಝುದ್ದೀನ್ ಅಹ್ಸನಿ ಮೌಲಿದ್ ಪಾರಾಯಣದ ನೇತೃತ್ವ ವಹಿಸಿದ್ದರು. ಮಂಜನಾಡಿ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಪಿ.ಎ ಅಹ್ಮದ್ ಬಾಖವಿ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮಾಡಿದರು.
ವಿಶ್ವನಾಥ್ ರೈ., ಪ್ರೆಮನಾಥ್ ರೈ ಅತಿಥಿಗಳಾಗಿ ಆಗಮಿಸಿದರು. ವೇದಿಕೆಯಲ್ಲಿ ಅಬ್ದುಲ್ ಖಾದರ್ ನಿಝಾಮಿ, ನರಿಂಗಾನ ಗ್ರಾಪಂ ಅಧ್ಯಕ್ಷ ನವಾಝ್ ಎಂ.ಬಿ, ರಝಾಕ್ ಪಾರೆ, ಇಬ್ರಾಹಿಂ ಹಾಜಿ ಪಾರೆ, ಮೂಸ ಹಾಜಿ, ಕಾಸಿಮ್ ಲತೀಫಿ, ಇಬ್ರಾಹಿಂ ಅಹ್ಸನಿ, ಹಮೀದ್ ತಟ್ಲ, ಬಶೀರ್ ಎನ್.ಎಂ, ಆಸಿಫ್ ಕೆ.ಎಚ್, ಮಜೀದ್ ಎನ್.ಎಂ, ಅನೀಸ್ ಬಲಪ್ಪು ಉಪಸ್ಥಿತರಿದರು.
ಕೊಲ್ಲರಕೋಡಿ ಮದರಸ ಮುಅಲ್ಲಿಂ ಅಬ್ದುಲ್ ಸಮದ್ ಮರ್ಝೂಕಿ ಕಾರ್ಯಕ್ರಮ ನಿರೂಪಿಸಿದರು.







