ಉಳ್ಳಾಲ: ಮದನಿಯ್ಯ ಸಾದಾತ್ ಫೌಂಡೇಶನ್ನಿಂದ ಸಹಾಯಧನ ಬಿಡುಗಡೆ

ಉಳ್ಳಾಲ: ಮದನಿಯ್ಯ ಸಾದಾತ್ ಫೌಂಡೇಶನ್, ಕರ್ನಾಟಕ ಇದರ ವತಿಯಿಂದ ಬಡ ಸಾದಾತ್ ಕುಟುಂಬಗಳ ಮದುವೆಯ ಸಹಾಯಸ್ಥವಾಗಿ 65,000 ರೂಪಾಯಿಯ ಚೆಕ್ ಅನ್ನು ಝೈನುಲ್ ಉಲಮಾ ಮಾಣಿ ಉಸ್ತಾದರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮದನಿಯ್ಯ ಸಾದಾತ್ ಫೌಂಡೇಶನ್ನ ಅಧ್ಯಕ್ಷರಾದ ಸೈಯದ್ ಜವಾದ್ ತಂಙಳ್, ಕೋಶಾಧಿಕಾರಿ ರಮೀಝ್ ಉಳ್ಳಾಲ್, ಡಿವಿಷನ್ ಉಸ್ತುವಾರಿ ಕಬೀರ್ ಹನೀಫಿ ಇಡ್ಯ, ಹಂಝ ಯು.ಬಿ., ಶಬೀರ್ ಹಳೆಕೋಟೆ, ಮುಸ್ತಫಾ ಉಳ್ಳಾಲ್ ಉಪಸ್ಥಿತರಿದ್ದರು.
Next Story





