ಮದನಿಯ್ಯ ಸಾದಾತ್ ಫೌಂಡೇಶನ್ ನಿಂದ ಸಹಾಯಧನ ಬಿಡುಗಡೆ

ಮಂಗಳೂರು, ಜು.29: ಮದನಿಯ್ಯ ಸಾದಾತ್ ಫೌಂಡೇಶನ್ (ಎಂಎಸ್ಎಫ್), ಕರ್ನಾಟಕ ಇದರ ವತಿಯಿಂದ ಬಡ ಸಾದಾತ್ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ 80,000 ರೂ. ಸಹಾಯಧನವನ್ನು ಫೌಂಡೇಶನ್ ಅಧ್ಯಕ್ಷ ಸೈಯದ್ ಜವಾದ್ ತಂಙಳ್ ರ ನೇತೃತ್ವದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಉದ್ಯಮಿ ಸಿ.ಎಂ.ಫಾರೂಕ್, ಫೌಂಡೇಶನ್ ಕಾರ್ಯದರ್ಶಿ ಹಂಝ ಉಳ್ಳಾಲ್, ಕೋಶಾಧಿಕಾರಿ ರಮೀಝ್ ಮೇಲಂಗಡಿ, ಕಾರ್ಯಕರ್ತರಾದ ಕೆ.ಪಿ.ಮುಹಮ್ಮದ್ ದೇರಳಕಟ್ಟೆ, ಹಂಝ ಯು.ಬಿ., ರಿಯಾಝ್ ಅಡ್ಕರೆ ಉಪಸ್ಥಿತರಿದ್ದರು.
Next Story





