ಮಂಗಳೂರು | ಕಾಣೆಯಾದವರ ಪತ್ತೆಗೆ ಮನವಿ

ಮಂಗಳೂರು,ಡಿ.15: ಬಾಗಲಕೋಟೆ ಮೂಲದ ಹುಸೈನ್ ಸಾಬ್ ಲಾಲ್ಸಾಬ್(32) ಎಂಬವರು ಬುದ್ಧಿಮಾಂದ್ಯರಾಗಿದ್ದು, ಪ್ರಸ್ತುತ ನಗರದ ಕುಲಶೇಖರದ ಕಲ್ಪನೆಯ ಬಾಡಿಗೆ ಮನೆ ನಿವಾಸಿಯಾಗಿರುವ ಅವರು ಡಿ. 12 ರಂದು ಮನೆಯಿಂದ ಹೋದವರು ಕಾಣೆಯಾಗಿರುವ ಬಗ್ಗೆ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





