ಮಂಗಳೂರು | ನಾವೀನ್ಯತೆ/ಆವಿಷ್ಕಾರ ಪುರಸ್ಕಾರ: ಅರ್ಜಿ ಆಹ್ವಾನ

ಮಂಗಳೂರು,ನ.28:ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿಯ ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಅಥವಾ ಆರ್ಥಿಕತೆಯ ಯಾವುದೇ ಭಾಗದಿಂದ ಮೂಡಿದ, ಗ್ರಾಮೀಣ ಪ್ರದೇಶದ ಜನಜೀವನವನ್ನು ಪರಿವರ್ತಿಸಲು ಸಹಾಯಕವಾದ ಅಥವಾ ಉದ್ಯಮಗಳು ಹಾಗೂ ಉದ್ಯೋಗ ಸೃಷ್ಟಿಗೆ ಕಾರಣವಾದ ಅನುಕರಣೀಯ ಆವಿಷ್ಕಾರಗಳು/ಪರಿಹಾರಗಳನ್ನು ಪ್ರತಿ ವಷರ್ ಗುರುತಿಸಿ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಗೂ ಬೋಧಕರಿಗೆ ಮತ್ತು ಜನಸಾಮಾನ್ಯರಿಗೆ ಆವಿಷ್ಕಾರ/ನಾವೀನ್ಯತೆಗೆ ಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸ್ನಾತಕೋತ್ತರ ವಿದ್ಯಾರ್ಥಿಗಳ ಅತ್ಯುತ್ತಮ ಆವಿಷ್ಕಾರ/ನಾವೀನ್ಯತೆಗೆ ಪ್ರೊ.ಯು.ಆರ್.ರಾವ್ ಪುರಸ್ಕಾರ, ಪದವಿ ವಿದ್ಯಾರ್ಥಿಗಳ ಅತ್ಯುತ್ತಮ ಆವಿಷ್ಕಾರ/ನಾವೀನ್ಯತೆಗೆ ಡಾ. ಎಸ್.ಕೆ. ಶಿವಕುಮಾರ್ ಪುರಸ್ಕಾರ, ಬೋಧಕರು ಹಾಗೂ ಜನಸಾಮಾನ್ಯರ ಅತ್ಯುತ್ತಮ ಆವಿಷ್ಕಾರ/ನಾವೀನ್ಯತೆಗೆ ಪ್ರೊ. ಎಸ್. ಅಯ್ಯಪ್ಪನ್ ಪುರಸ್ಕಾರ ನೀಡಲಾಗುವುದು.
ಈ ಪುರಸ್ಕಾರಕ್ಕೆ 10,000 ರೂ.ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ. ಆಸಕ್ತರು ಡಿ.31ರೆೊಳಗಾಗಿ ಅಕಾಡಮಿಯ ವೆಬ್ಸೈಟ್ನಲ್ಲಿ (ಠಿಠಿ://ಠಿಚ್ಚಛಿಞ.ಜ್ಞಿ) ನೀಡಿರುವ ಮಾರ್ಗಸೂಚಿಯ ಅನ್ವಯ ಆನ್ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ 9620767819/ 9686449019 /080-29721550) ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.





