ಮಂಗಳೂರು | ಕ್ಲಾಕ್ ಟವರ್ ಬಳಿ ಪೊಲೀಸರಿಂದ ಲಾಠಿ ಕವಾಯತು

ಮಂಗಳೂರು: ನಗರದ ಕ್ಲಾಕ್ ಟವರ್ ಬಳಿ ಮಂಗಳೂರು ನಗರ ಪೊಲೀಸರಿಂದ ಸೋಮವಾರ ಲಾಠಿ ಕವಾಯತು ನಡೆಯಿತು. ಕೆಎಸ್ಆರ್ಪಿ ತುಕಡಿ ಗಳು ಕವಾಯತಿನಲ್ಲಿ ಭಾಗವಹಿಸಿದ್ದವು.
ಮಂಗಳೂರು ನಗರದಲ್ಲಿ ಇತ್ತೀಚೆಗೆ ಉಂಟಾಗಿರುವ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಕವಾಯತು ಪ್ರದರ್ಶನ ನೀಡಲಾಯಿತು. ಆ ಮೂಲಕ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳುಮಾಡುವ ಯಾವುದೇ ಪ್ರಯತ್ನವನ್ನು ತಡೆಯಲು ಪೊಲೀಸ್ ಪಡೆಗಳು ಸದಾ ಸಿದ್ಧ ಎಂಬ ಸಂದೇಶ ಸಾರಲು ಈ ಕವಾಯತು ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
Next Story