ಮಂಗಳೂರು | ಬ್ಯಾರಿ ಅಕಾಡಮಿ ಚಮ್ಮನಕ್ಕೆ ಹತ್ತು ಮಂದಿ ಸಾಧಕರ ಆಯ್ಕೆ

ಮಂಗಳೂರು, ನ.26: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2022 ಮತ್ತು 2023 ನೇ ಸಾಲಿನ ಬ್ಯಾರಿ ಅಕಾಡಮಿ ಚಮ್ಮನ (ಗೌರವ ಪುರಸ್ಕಾರ)ಕ್ಕೆ ಹತ್ತು ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಅಬ್ದುಲ್ ಸಮದ್ ಬಾವಾ (ಬ್ಯಾರಿ ಸಾಹಿತ್ಯ), ಅನ್ಸಾರ್ ಇನೋಳಿ (ಬ್ಯಾರಿ ಭಾಷೆ), ರಶೀದ್ ನಂದಾವರ (ಬ್ಯಾರಿ ಕಲೆ, ಸಂಸ್ಕೃತಿ), ನಝ್ಮತ್ತುನ್ನೀಸಾ ಲೈಝ್ (ಬ್ಯಾರಿ ಸಾಹಿತ್ಯ), ಮುಹಮ್ಮದ್ ಅಲಿ ಬಡ್ಡೂರು (ಬ್ಯಾರಿ ಸಂಸ್ಕೃತಿ, ಕಲೆ), ಟಿ.ಎಂ. ಶಹೀದ್ ( ಬ್ಯಾರಿ ಭಾಷೆ- ಸಂಘಟನೆ), ಎಂ.ಪಿ.ಬಶೀರ್ ಅಹ್ಮದ್ (ಬ್ಯಾರಿ ಸಾಹಿತ್ಯ), ಯಾಸೀರ್ ಕಲ್ಲಡ್ಕ (ಬ್ಯಾರಿ ಸಂಸ್ಕೃತಿ ), ಮಲ್ಲಿಕಾ ಶೆಟ್ಟಿ ( ಬ್ಯಾರಿ ಕಲೆ, ಸಂಸ್ಕೃತಿ), ಸೈಫ್ ಕುತ್ತಾರ್ ( ಬ್ಯಾರಿ ಭಾಷೆ) ಆಯ್ಕೆಯಾಗಿದ್ದಾರೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸ್ಥಾಯಿ ಸಮಿತಿ ಸಭೆ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿದೆ. ಬ್ಯಾರಿ ಅಕಾಡಮಿ ಚಮ್ಮನವು 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.
ಬ್ಯಾರಿ ಅಕಾಡಮಿ ಚಮ್ಮನ ಕಾರ್ಯಕ್ರಮವು ಡಿ.7ರಂದು ಪುತ್ತೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.





