ಕ.ರ.ವೇ ರಾಜ್ಯ ಕಾರ್ಯದರ್ಶಿಯಾಗಿ ಮೌಸೀರ್ ಅಹಮದ್ ಸಾಮಣಿಗೆ ನೇಮಕ

ಮಂಗಳೂರು: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ನೇತೃತ್ವದಲ್ಲಿ ಸಂಘಟನಾತ್ಮಕವಾಗಿ ದುಡಿಯುತ್ತಿರುವುದನ್ನು ಗೌರವಿಸಿ, ಜನಪರ ಮತ್ತು ಕನ್ನಡ ಪರ ಹಾಗೂ ಸಮಾಜಮುಖಿ ಚಿಂತನೆಯುಳ್ಳ ದ.ಕ. ಜಿಲ್ಲೆಯ ಉಳ್ಳಾಲ ತಾಲ್ಲೂಕಿನ ಮೌಶಿರ್ ಅಹಮದ್ ಯಸ್ .ಎ. ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ನಾರಾಯಣಗೌಡ ಅವರು ಆದೇಶ ನೀಡಿದ್ದಾರೆ.
ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ನೀಡಿರುವ ಕುವೆಂಪು ರವರ ಆಶಯಗಳನ್ನು ಈಡೇರಿಸಿ ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ದುಡಿಯಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





