‘ಒಮಾನ್ ಮರ್ಕಝುಲ್ ಹುದಾ’ಕ್ಕೆ ಪದಾಧಿಕಾರಿಗಳ ಆಯ್ಕೆ

ಸಾದಿಕ್ ಸುಳ್ಯ
ಮಂಗಳೂರು: ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಒಮಾನ್ ರಾಷ್ಟ್ರೀಯ ಸಮಿತಿಯ ಮಹಾ ಸಭೆ ಮತ್ತು ಶೈಖ್ ರಿಫಾಈ (ರ) ಸಂಸ್ಮರಣೆ ಕಾರ್ಯಕ್ರಮವು ಇತ್ತೀಚೆಗೆ ರುವಿ ಆತ್ರಾಡಿ ಹೌಸ್ನಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್ ಅವರ ನೇತೃತ್ವದಲ್ಲಿ ನಡೆಯಿತು.
ನಿಕಟಪೂರ್ವ ಅಧ್ಯಕ್ಷ ಹಾಜಿ ಇಬ್ರಾಹಿಂ ಆತ್ರಾಡಿ ಅಧ್ಯಕ್ಷತೆ ವಹಿಸಿದರು. ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಅಯ್ಯೂಬ್ ಕೋಡಿ ಸಭೆಯನ್ನು ಉದ್ಘಾಟಿಸಿದರು. ಮರ್ಕಝುಲ್ ಹುದಾ ಒಮಾನ್ ರಾಷ್ಟ್ರೀಯ ಸಮಿತಿಯ ಸಂಯೋಜಕ ಉಬೈದುಲ್ಲಾಹ್ ಸಖಾಫಿ ಮಿತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಿಕೆಎಸ್ಸಿ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಮೋನಬ್ಬ ಅಬ್ದುಲ್ ರಹ್ಮಾನ್, ಮಸ್ನವೀ ಗ್ಲೋಬಲ್ ಅಕಾಡಮಿಯ ಉಪಾಧ್ಯಕ್ಷ ಉಮರ್ ಸಖಾಫಿ ಎಡಪ್ಪಾಲ್ ಮಾತನಾಡಿದರು.
ಒಮಾನ್ ರಾಷ್ಟ್ರೀಯ ಸಮಿತಿಯ ಗೌರವಾಧ್ಯಕ್ಷರಾಗಿ ಹಾಜಿ ಮುಹಮ್ಮದ್ ಇಬ್ರಾಹಿಂ ಆತ್ರಾಡಿ, ಅಧ್ಯಕ್ಷರಾಗಿ ಮುಹಮ್ಮದ್ ಸ್ವಾದಿಖ್ ಸುಳ್ಯ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಫಾಝಿಲ್ ಕಂಕನಾಡಿ, ಕೋಶಾಧಿಕಾರಿಯಾಗಿ ಉಮರ್ ಸಖಾಫಿ ಅಲ್ಸಫಾ, ಉಪಾಧ್ಯಕ್ಷರಾಗಿ ಸಮೀರ್ ಉಸ್ತಾದ್ ಹೂಡೆ, ಹಂಝ ಹಾಜಿ ಕನ್ನಂಗಾರ್, ಕಾರ್ಯದರ್ಶಿಗಳಾಗಿ ಅಬ್ದುಲ್ಲತೀಫ್ ಮಂಜೇಶ್ವರ, ಅಬ್ಬಾಸ್ ಮರಕಡ, ಕೋಆರ್ಡಿನೇಟರ್ ಆಗಿ ಉಬೈದುಲ್ಲಾಹ್ ಸಖಾಫಿ ಮಿತ್ತೂರು, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಝೀಝ್ ಬಾಳೆಹೊನ್ನೂರು, ಹನೀಫ್ ಮಣ್ಣಾಪು, ಸಿದ್ದೀಕ್ ಕಬಕ, ಲತೀಫ್ ತೋಡಾರ್, ರಿಯಾಝ್ ಮಂಜನಾಡಿ, ಮುಝಮ್ಮಿಲ್ ಅಳಕೆಮಜಲು, ಸಿದ್ದೀಕ್ ಕೋಟ, ಶಾಹುಲ್ ಹಮೀದ್ ಸುರಲ್ಪಾಡಿ, ಕರೀಂ ಕಂಡಿಗೆ, ಶಾಕಿರ್ ಸುಳ್ಯ, ರಜಬ್ ಕಾಪು ಆಯ್ಕೆಯಾಗಿದ್ದಾರೆ.
ಸಲಹೆಗಾರರಾಗಿ ಸಯ್ಯಿದ್ ಝೈನುಲ್ ಆಬಿದ್ ಅಲ್ ಹೈದ್ರೋಸ್ ಎಮ್ಮೆಮಾಡು, ಇಖ್ಬಾಲ್ ಬರಕ, ಅಯ್ಯೂಬ್ ಕೋಡಿ, ಮೋನಬ್ಬ ಅಬ್ದುಲ್ ರಹ್ಮಾನ್, ಫಾರೂಕ್ ಸೊಹಾರ್, ಆರಿಫ್ ಕೋಡಿ, ಸಯ್ಯಿದ್ ಮೊಹಿದ್ದಿನ್ ಸಾಹೆಬ್ ಸಾಸ್ತಾನ, ಅಬ್ಬಾಸ್ ಪಡುಬಿದ್ರೆ, ಉಸ್ತಾದ್ ರಫೀಕ್ ಹೂಡೆ ಅವರನ್ನು ಆರಿಸಲಾಯಿತು.







